ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಕೃಷಿಕ ಕುಟುಂಬದಿಂದ ಬಂದಿರುವ ನಾನು ಕಳೆದ ಸುಮಾರು 10 ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದೇನೆ. ಇದಕ್ಕಾಗಿ ಅತ್ಯಧಿಕ ಹಣವನ್ನು ಖರ್ಚು ಮಾಡಿರುತ್ತೇನೆ. ಆದರೂ ಕೂಡಾ ನನಗೆ ಇದುವರೆಗೂ ಕನ್ಯಾ ಕೊಡಲು ಯಾರು ಮುಂದೆ ಬಂದಿಲ್ಲವೆಂದು ಜಿಲ್ಲೆಯ ಕನಕಗಿರಿಯ ಗೌಡರ ಓಣಿಯ ಯವಕ ಸಂಗಪ್ಪ ಎಂಬಾತ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ.
ಬುಧವಾರ ಜಿಲ್ಲಾಡಳಿತದ ವತಿಯಿಂದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಈ ರೀತಿಯ ಮನವಿಯೊಂದು ಬಂದಿದೆ. ವೇದಿಕೆ ಏರಿ ಬಂದು ಯುವಕ ಸಂಗಪ್ಪ ತನ್ನ ಪರಿಸ್ಥಿತಿಯನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ. ರೈತರ ಮಕ್ಕಳಿಗೆ ಕನ್ಯಾ ಕೊಡುತ್ತಿಲ್ಲ. ಸರ್ಕಾರದಿಂದ ಕಾರ್ಯಕ್ರಮವೊಂದು ಜಾರಿಗೆ ತೆಗೆದುಕೊಂಡು ಬನ್ನಿ ಎಂದಿದ್ದಾನೆ. ಇದನ್ನು ಕೇಳಿದ ಅವರು ನಕ್ಕು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.