ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾನಿ ಆರೋಗ್ಯದಲ್ಲಿ ಬುಧವಾರ ರಾತ್ರಿ ಏರುಪೇರಾಗಿದೆ. ಹೀಗಾಗಿ ತಡರಾತ್ರಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಧ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೆ ವರ್ಷ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಿಂದುತ್ವದ ಪ್ರತಿಪಾದಕ, ರಾಮ ಮಂದಿರ ಹೋರಾಟದ ಮೂಲಕ ಮುನ್ನಲೆಗೆ ಬಂದು ಬಿಜೆಪಿಯ ಇಂದಿನ ಯಶಸ್ಸಿನ ಕಾರಣಿಕರ್ತ ನಾಯಕರಲ್ಲಿ ಇವರು ಒಬ್ಬರು.