ಬಿಎಸ್ವೈ, ದರ್ಶನ್, ಪ್ರಜ್ವಲ್ ಪ್ರಕರಣ: ರಮ್ಯಾ ಆಕ್ರೋಶ

96

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯಡಿಯೂರಪ್ಪ ಪೋಕ್ಸೋ ಪ್ರಕರಣ, ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ, ದರ್ಶನ್ ಕೊಲೆ ಪ್ರಕರಣ.. ಹೀಗೆ ರಾಜ್ಯದಲ್ಲಿ ಇತ್ತೀಚೆಗೆ ದೊಡ್ಡ ಚರ್ಚೆಗೆ ಗ್ರಾಸವಾಗಿರುವ ಪ್ರಕರಣಗಳ ವಿರುದ್ಧ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಈಗ ಸುದ್ದಿರುವವರು ಕಾನೂನು ಉಲ್ಲಂಘನೆ ಮಾಡಿರುವವರು ಶ್ರೀಮಂತರು ಹಾಗೂ ಶಕ್ತಿಶಾಲಿಗಳಾಗಿದ್ದಾರೆ. ಇವರ ಕೃತ್ಯಗಳಿಂದಾಗಿ ಮಹಿಳೆಯರು, ಮಕ್ಕಳು, ಬಡವರ ಜೀವನ ಹಾಳಲಾಗಿದೆ. ಪೊಲೀಸರು, ಮಾಧ್ಯಮದವರು ಕೃತ್ಯಗಳನ್ನು ಬಯಲಿಗೆ ತಂದಿದ್ದಕ್ಕೆ ಅಭಿನಂದನೆಗಳು.

ಈ ಪ್ರಕರಣಗಳು ತಾರ್ತಿಕ ಅಂತ್ಯ ಕಂಡು ನ್ಯಾಯ ಸಿಗುತ್ತದೆ. ಇದು ಸಾರ್ವಜನಿಕರಿಗೆ ಯಾವ ಸಂದೇಶ ನೀಡುತ್ತದೆ ಅಂತಾ ಪ್ರಶ್ನಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!