ಡಕೋಟಾ ಬಸ್ಸಗಳಲ್ಲಿ ಅವಕಾಶ: ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯ

120

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಚುನಾವಣೆಪೂರ್ವದಲ್ಲಿ ನನಗೂ ಫ್ರೀ.. ನಿನಗೂ ಫ್ರೀ ಎಂದು ಹೇಳಿದ್ದ ಸಿದ್ದರಾಮಯ್ಯ, ಈಗ ಮುಖ್ಯಮಂತ್ರಿಯಾದ ಮೇಲೆ ನನ್ನ ಹೆಂಡ್ತಿಗೂ ಡಕೋಟಾ.. ನಿನ್ನ ಹೆಂಡ್ತಿಗೂ ಡಕೋಟಾ ಬಸ್ ಎನ್ನುತ್ತಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಎಲ್ಲ ಬಸ್ಸುಗಳಲ್ಲಿ ಉಚಿತ ಪ್ರಯಾಣ ಎಂದು ಸಿದ್ದರಾಮಯ್ಯ ಈಗ ಷರತ್ತು ವಿಧಿಸುತ್ತಿದ್ದಾರೆ. ಡಕೋಟಾ ಬಸ್ ಗಳಲ್ಲಿ ಉಚಿತ ಪ್ರಯಾಣ ಎನ್ನುತ್ತಿದ್ದಾರೆ. ಈ ಮೂಲಕ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ತಿರುಗೇಟು ನೀಡಿರುವ ಸಚಿವ ಎಂ.ಬಿ ಪಾಟೀಲ, ನೀವು ಅಧಿಕಾರದಲ್ಲಿ ಇದ್ದಾಗಲು ಶೇಕಡ 94ರಷ್ಟು ಸಾಮಾನ್ಯ ಬಸ್ಸುಗಳಿದ್ದವು. ಈಗ ಅವುಗಳು ನಿಮಗೆ ಡಕೋಟಾ ತರ ಕಾಣುತ್ತಿವೆಯೇ ಎಂದು ಪ್ರಶ್ನಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!