ಪ್ರಜಾಸ್ತ್ರ ಸುದ್ದಿ
ಪುತ್ತೂರು: ಭಾರಿ ಮಳೆಯಿಂದಾಗಿ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆ ಬನ್ನೂರಿನ ಜೈನರಗುರಿ ಎಂಬಲ್ಲಿ ನಡೆದಿದೆ. ಮಜೀದ್ ಎಂಬುವರ ಮನೆ ಮೇಲೆ ಗುಡ್ಡ ಕುಸಿದಿದೆ. ಈ ವೇಳೆ ತಂದೆಯೇ ಮಕ್ಕಳನ್ನು ರಕ್ಷಿಸಿದ್ದಾರೆ.
ಮನೆಯಲ್ಲಿ ಮಕ್ಕಳೊಂದಿಗೆ ಮಜೀದ್ ಎಂಬುವರು ಮಲಗಿದ್ದಾಗ, ಗುರುವಾರ ನಸುಕಿನ ಜಾವ ಗುಡ್ಡ ಕುಸಿದಿದೆ. ತಕ್ಷಣ ಎಚ್ಚತ ಮಜೀದ್ ಮಕ್ಕಳನ್ನು ರಕ್ಷಿಸಿದ್ದಾರೆ. ಸ್ಥಳೀಯರು, ನಗರಸಭೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಹಲವು ಮನೆಗಳಿಗೆ ಹಾನಿಯಾಗಿವೆ.