ಹಿಟ್ನಳ್ಳಿ ತಾಂಡಾ ಮಹಿಳೆ ಕೊಲೆ, ಆರೋಪಿ ಬಂಧನ: ಎಸ್ಪಿ ಆನಂದಕುಮಾರ

468

ಪ್ರಜಾಸ್ತ್ರ ಅಪರಾಧ ಸುದ್ದಿ

ಇಂಡಿ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ನಡೆದ ಮಹಿಳೆಯ ಕೊಲೆಯ ಸಂಬಂಧ ಆಕೆಯ ಪತಿಯನ್ನ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಹೇಳಿದ್ದಾರೆ.

ಈ ಬಗ್ಗೆ ಇಂಡಿಯಲ್ಲಿ ಮಾತನಾಡಿದ ಅವರು, ಸುನೀಲ ರಾಜು ನಾಯಕ ಬಂಧಿತ ಆರೋಪಿಯಾಗಿದ್ದಾನೆ.‌ ಹಿಟ್ನಳ್ಳಿ ತಾಂಡಾದಲ್ಲಿ ವರದಕ್ಷಿಣೆ ಕಿರುಕುಳದಿಂದ ನಿನ್ನೆ ಸಾವಿತ್ರಿ ಸುನೀಲ ನಾಯಕ ಸಾವನ್ನಪ್ಪಿದರು. ಇದನ್ನ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದ್ರೆ, ಡಿವೈಎಸ್ಪಿ ಶ್ರೀಧರ ದಡ್ಡಿ ನೇತೃತ್ವದ ತಂಡದಿಂದ, ಇದು ಆತ್ಮಹತ್ಯೆಯಲ್ಲ. ಕೊಲೆ ಎಂದು ತಿಳಿದುಬಂದಿದೆ. ಗಂಡ ಸುನೀಲನನ್ನ ವಶಕ್ಕೆ ಪಡೆಯಲಾಗಿದೆ.

ಇನ್ನು ಮತ್ತೊಂದು ಪ್ರಕರಣದಲ್ಲಿ ‌ತಂದೆಯನ್ನೇ ಮಗ ಕಲ್ಲಿನಿಂದ ಜಜ್ಜಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಂಡಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಅಹಿರಸಂಗ ನಿವಾಸಿ ಹಣಮಂತ ಅಮೋಘಿ ಮೂಲಿಮನಿ ಬಂಧಿತ ಆರೋಪಿಯಾಗಿದ್ದಾನೆ. ತಂದೆ ಅಮೋಘಿ ಮೂಲಿಮನಿಯನ್ನ ಹತ್ಯೆಗೈದು ಪರಾರಿಯಾಗಿದ್ದ. ಈ ಕುರಿತು ಸಿಪಿಐ ರಾಜಶೇಖರ ನೇತೃತ್ವದಲ್ಲಿ ಆರೋಪಿ ಹಣಮಂತನ್ನು ಬಂಧಿಸಿ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!