ಎಸ್ಪಿ ಕಚೇರಿ ಮುಂದೆಯೇ ಪತ್ನಿ ಕೊಂದ ಕಾನ್ಸ್ ಟೇಬಲ್

83

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಪತಿ ವಿರುದ್ಧ ಪತ್ನಿ ಎಸ್ಪಿಗೆ ದೂರು ನೀಡಲು ಬಂದಿದ್ದ ಸಂದರ್ಭದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮಮತಾ ಕೊಲೆಯಾದ ಮಹಿಳೆ. ಪತಿ, ಕಾನ್ಸ್ ಟೇಬಲ್ ಲೋಕನಾಥ್ ಕೊಲೆ ಮಾಡಿದಾತ.

ಕೌಟುಂಬಿಕ ಕಲಹದಿಮದಾಗಿ ಪತ್ನಿ ಇವತ್ತು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಬಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಹಾಸನ ನಗರ ಠಾಣೆಯ ಕಾನ್ಸ್ ಟೇಬಲ್, ಪತಿ ಲೋಕನಾಥ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ತಕ್ಷಣ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಲೋಕನಾಥನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!