ಗುಮ್ಮಟನಗರಿಯಲ್ಲಿ ಯಾರು ಮುನ್ನಡೆ?

99

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟನಗರಿಯಲ್ಲಿ ಬಿಜೆಪಿಯ ರಮೇಶ ಜಿಗಜಿಣಗಿ ಹಾಗೂ ಕಾಂಗ್ರೆಸ್ ನ ರಾಜು ಆಲಗೂರ ನಡುವೆ ಫೈಟ್ ಜೋರಾಗಿದೆ. ಎಸ್ಸಿ ಮೀಸಲು ಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಜಿಗಜಿಣಗಿ ಗೆಲುವು ಸಾಧಿಸಿದ್ದು, ಈ ಬಾರಿ ಇವರಿಗೆ ರಾಜು ಆಲಗೂರ ಠಕ್ಕರ್ ಕೊಡುತ್ತಾರ ಎನ್ನುವ ಕುತೂಹಲವಿದೆ.

ಸಧ್ಯದ ಮತ ಎಣಿಕೆ ನೋಡಿದರೆ ಬಿಜೆಪಿ 37,173 ಮತಗಳನ್ನು ಗಳಿಸಿದೆ. ಕಾಂಗ್ರೆಸ್ 28,934 ಮತಗಳನ್ನು ಪಡೆದಿದೆ. ಹೀಗಾಗಿ ಜಿಗಜಿಣಗಿ 8,239 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕೌಂಟಿಂಗ್ ಸೂಪರ್ ವೈಸರ್ ಗೆ ಎದೆ ನೋವು

ಇನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಿದೆ. ಕೌಂಟಿಂಗ್ ಸೂಪರ್ ವೈಸರ್ ಆಗಿರುವ ಸಿದ್ದರಾಜ ದೊಡ್ಡಮನಿ ಎಂಬುವರಿಗೆ ಎದೆ ನೋವು ಕಾಣಿಸಿಕೊಂಡಿದೆ.

ಆದಿಲ್ ಶಾಹಿ ಸದನದಲ್ಲಿ ಕೌಂಟಿಂಗ್ ಸೂಪರ್ ವೈಸರ್ ಆಗಿದ್ದರು. ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.




Leave a Reply

Your email address will not be published. Required fields are marked *

error: Content is protected !!