ಕೈ ಕೊಟ್ಟ ಹುಡುಗಿ.. ಪ್ರಾಣ ಬಿಟ್ಟ ಹುಡುಗ

129

ಪ್ರಜಾಸ್ತ್ರ ಸುದ್ದಿ

ದೊಡ್ಡಬಳ್ಳಾಪುರ: ಪ್ರೀತಿಸಿ ಮೋಸ ಮಾಡಿದಳು ಎನ್ನುವ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ಕೇವಲ 23 ವರ್ಷದ ಯುವಕ ಬಾಲಾಜಿ ಕಾಳುಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ಸ್ಟಾಗ್ರಾಮ್ ಮೂಲಕ ಒಂದು ವರ್ಷದ ಹಿಂದೆ ಪರಿಚಯವಾದ ಯುವತಿಯೊಂದಿಗೆ ಸ್ನೇಹ ಬೆಳೆದಿದೆ. ಕೊನೆಗೆ ಅದು ಪ್ರೀತಿಗೆ ತಿರುಗಿದೆ. ಕಳೆದೊಂದು ವರ್ಷದಿಂದ ಅಲ್ಲಿ ಇಲ್ಲಿ ಸುತ್ತಾಡಿದ್ದಾರೆ. ಅವರ ಪರಿಚಯವಾಗಿ ಮೇ 13ಕ್ಕೆ ಒಂದು ವರ್ಷವಾಗಿದೆ. ಹೀಗಾಗಿ ಯುವಕ ಮದುವೆ ಪ್ರಸ್ಥಾಪ ಮಾಡಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಜೊತೆಗೆ ತಾನು ಮತ್ತೊಂದು ಹುಡುಗನೊಂದಿಗೆ ಪ್ರೀತಿಯಲ್ಲಿ ಇರುವುದಾಗಿ ಹೇಳಿದ್ದಾಳೆ.

ತನಗೆ ಮೋಸ ಮಾಡಿದಳು ಎಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿ ಕನಕಪುರ ಮೂಲದವಳೆಂದು ತಿಳಿದು ಬಂದಿದೆ. ಹುಡುಗ ಅಮೆಜಾನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಯುವತಿ ವಿರುದ್ಧ ಯುವಕನ ಕುಟುಂಬಸ್ಥರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!