ಇಂದು ಮುಂದುವರೆದ ವಿಚಾರಣೆ, ಸ್ಥಳ ಮಹಜರು

83

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳ ವಿಚಾರಣೆ ಇಂದು ಸಹ ನಡೆಯಲಿದೆ. ಅನ್ನಪೂರ್ಣೇಶ್ವರ ಠಾಣೆಯಲ್ಲಿ ಕಳೆದ ರಾತ್ರಿ ಎಲ್ಲರನ್ನು ಇರಿಸಲಾಗಿತ್ತು.

ಈಗಾಗ್ಲೇ ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಹೀಗಾಗಿ ಪ್ರಕರಣ ಸಂಬಂಧ ಎಲ್ಲರ ವಿಚಾರಣೆ ನಡೆಯಲಿದೆ. ಇದಾದ ನಂತರ ಸ್ಥಳ ಮಹಜರು ನಡೆಯಲಿದೆ. ಮೃತನನ್ನು ಎಲ್ಲಿಂದ ಎಲ್ಲಿಗೆ ಕರೆದುಕೊಂಡು ಬಂದು ಹಲ್ಲೆ ಮಾಡಲಾಗಿದೆ. ಈ ವೇಳೆ ಯಾವುದೆಲ್ಲ ವಸ್ತುಗಳನ್ನು ಬಳಸಿದ್ದರು. ನಂತರ ಮೃತದೇಹ ತಂದು ಎಸೆದ ಜಾಗ ಸೇರಿ ಘಟನೆಗೆ ಸಂಬಂಧಿಸಿದ ಜಾಗಗಳ ಮಹಜರು ನಡೆಯಲಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಮೃತದೇಹದ ಸಂಬಂಧ ದಾಖಲಾದ ಪ್ರಕರಣದ ಮೇಲೆ ಈ ತನಿಖೆ ನಡೆಯುತ್ತಿದೆ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಕೇಸ್ ದಾಖಲಾಗಿಲ್ಲ. ಇನ್ನು ಅನ್ನಪೂರ್ಣೇಶ್ವರ ಠಾಣೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!