ದರ್ಶನ್ ಕಸ್ಟಡಿಗೆ.. ಪವಿತ್ರಾಗೌಡ ಜೈಲಿಗೆ..

57

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧತರಾಗಿರುವ ನಟ ದರ್ಶನ್, ಗೆಳತಿ ಪವಿತ್ರಾಗೌಡ ಸೇರಿ 17 ಆರೋಪಿಗಳ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ಕೋರ್ಟ್ ಗೆ ಹಾಜರು ಪಡಿಸಲಾಯಿತು. ಈ ವೇಳೆ ವಾದ ಪ್ರತಿವಾದ ನಡೆದಿದೆ.

ಎಸ್ ಪಿಸಿ ಪ್ರಸನ್ನಕುಮಾರ್ ಎ2 ದರ್ಶನ್, ಎ3 ವಿನಯ್, ಪ್ರದೂಶ್, ಧನರಾಜ್ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ದರ್ಶನ್ ಪರ ವಕೀಲರು ಇದನ್ನು ವಿರೋಧಿಸಿದರು. 24ನೇ ಎಸಿಎಂಎಂ ಕೋರ್ಟ್ ನ್ಯಾಯಮೂರ್ತಿ ವಿಶ್ವನಾಥ್.ಸಿ ಗೌಡರ್ ಅವರು 2 ದಿನಗಳ ಕಾಲ ಪೊಲೀಸ್ಟ್ ಕಸ್ಟಡಿ ನೀಡಿ ಆದೇಶಿಸಿದ್ದಾರೆ. ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ಹೇಳಿಕೆ.

ಇನ್ನು ಎ1 ಆರೋಪಿ ಪವಿತ್ರಾಗೌಡ, ಎ3 ವಿನಯ್, ನಾಗರಾಜ್, ಲಕ್ಷ್ಮಣ್, ಪವನ್, ರಾಘವೇಂದ್ರ, ನಂದೀಶ್, ಅನುಕುಮಾರ್, ರವಿಶಂಕರ್, ಜಗದೀಶ್ ಸೇರಿದಂತೆ 11 ಆರೋಪಿಗಳ ವಿಚಾರಣೆ ಮುಗಿದಿದ್ದು ಕಸ್ಟಡಿಗೆ ಮನವಿ ಮಾಡಿರಲಿಲ್ಲ. ಹೀಗಾಗಿ ಇವರನ್ನು ಜೈಲಿಗೆ ಕಳಿಸಾಗಿದೆ.




Leave a Reply

Your email address will not be published. Required fields are marked *

error: Content is protected !!