ಪ್ರಜಾಸ್ತ್ರ ಅಪರಾಧ ಸುದ್ದಿ
ರಾಯಚೂರು: ಪೊಲೀಸರನ್ನು ಕೊಲೆ ಮಾಡಿ ಪರಾರಿಯಾಗಿಲು ಯತ್ನಿಸಿದ ಐವರು ದರೋಡೆಕೋರರಲ್ಲಿ ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಲಿಂಗಸಗೂರು ತಾಲೂಕಿನ ಕಲಬುರಗಿ ರಸ್ತೆಯಲ್ಲಿ ನಡೆದಿದೆ.
ಯಾದಗಿರಿಯ ಗುರುರಾಜ ಚವ್ಹಾಣ, ಕನ್ಯಾಕೋಳೂರು ತಾಂಡಾದ ಕುಮಾರ ಯಮನಪ್ಪಾ ಚೌವ್ಹಾಣ, ಜಿನಕೇರಿತಾಂಡಾದ ಸುರೇಶ ಪೂಲಸಿಂಗ್ ರಾಠೋಡ ಅನ್ನೋ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಕನ್ಯಾಕೋಳೂರು ತಾಂಡಾದ ಮಾನಪ್ಪ ರಾಠೋಡ, ತಿಪ್ಪಣ್ಣ ಚಂದಪ್ಪ ರಾಠೋಡ ಪರಾರಿಯಾಗಿದ್ದಾರೆ.
ಈ ದರೋಡೆಕೋರರ ತಂಡ ತಿಂಥಣಿ ಬ್ರಿಜ್ಡ್ ಮಾರ್ಗವಾಗಿ ಲಿಂಗಸಗೂರು ಕಡೆ ಹೊರಟಿರುವ ಮಾಹಿತಿ ಸಿಕ್ಕಿದ್ದರಿಂದ ಇನ್ಸ್ ಪೆಕ್ಟರ್ ಪುಂಡಲೀಕ ಪಟತ್ತರ ನೇತೃತ್ವದ ತಂಡ ಅವರನ್ನು ಹಿಡಿಯಲು ಹೋಗಿದೆ. ಆಗ ಮಾಣಿಕೇಶ್ವರಿ ಮಠದ ಹತ್ತಿರ ಪೊಲೀಸರ ಜೀಪ್ ಮೇಲೆಯೇ ಸ್ಕಾರ್ಪಿಯೊ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ.
ಪೊಲೀಸರು ಹಾಗೂ ದರೋಡೆಕೋರರ ನಡುವೆ ಹೋರಾಟ ನಡೆದಿದೆ. ಬಸವಸಾಗರ ಸರ್ಕಲ್ ಬಳಿ ಕೊನೆಗೂ ಸಿಕ್ಕಿದ್ದಾರೆ. ಆಗ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಕೊನೆಗೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಗೆ ಸಹಕರಿಸುವಾಗ ಗಾಯಗೊಂಡ ಕೆಲ ಸ್ಥಳೀಯರು ಹಾಗೂ ಕಾನ್ಸ್ ಟೇಬಲ್ ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.