ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರೌಡಿಗಳನ್ನು ಬಂಧಿಸಿವ ಪೊಲೀಸರು ಅವರನ್ನು ಮೆರವಣಿಗೆ ಮಾಡಿಸುವುದು ಸಿನಿಮಾದಲ್ಲಿ ನೋಡಿರುತ್ತೇವೆ. ಇದೀಗ ಸಿಲಿಕಾನ್ ಸಿಟಿ ಪೊಲೀಸರು ಇದೆ ರೀತಿ ರೌಡಿಯ ಮೆರವಣಿಗೆ ಮಾಡಿದ್ದಾರೆ. ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯಿ ಮೆರವಣಿಗೆಯನ್ನು ಡಿ.ಜೆ ಹಳ್ಳಿ ಪೊಲೀಸರು ನಡೆಸಿದ್ದಾರೆ.
ರೌಡಿ ಸುಹೇಲ್ ತನ್ನದೆಯಾದ ತಂಡ ಕಟ್ಟಿಕೊಂಡು ಏರಿಯಾಗಳಲ್ಲಿ ದಬ್ಬಾಳಿಕೆ ಮಾಡುತ್ತಿದ್ದ. ಅಂಗಡಿ, ಮಳಿಗೆಗಳಿಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ. ಹಣ ನೀಡದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದ. ಇದರಿಂದ ಜನರೆಲ್ಲ ರೋಸಿ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಜನರಲ್ಲಿ ಧೈರ್ಯ ತುಂಬುವ ಸಲುವಾಗಿ ರೌಡಿಯ ಮೆರವಣಿಗೆ ನಡೆಸಿದ್ದಾರೆ. ಅವನಿಂದ ಜನರಿಗೆ ಕೈ ಮುಗಿಸಿ, ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲವೆಂದು ಹೇಳಿಸಿದ್ದಾರೆ. ಪುಡಿ ರೌಡಿಗಳಿಗೆಲ್ಲ ಹೆದರಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ.