ಪ್ರಜಾಸ್ತ್ರ ಅಪರಾಧ ಸುದ್ದಿ
ಚಿಕ್ಕಬಳ್ಳಾಪುರ: ಡಿವೋರ್ಸ್ ನೀಡಿದ್ದ ಪತ್ನಿಯನ್ನು ಪತಿ ಹಾಗೂ ಆತನ 2ನೇ ಪತ್ನಿಯ ಮಗ ಕೂಡಿಕೊಂಡು ಕೊಲೆ ಮಾಡಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೊಣ್ಣೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
45 ವರ್ಷದ ಪದ್ಮಮ್ಮ ಕೊಲೆಯಾದ ದುರ್ದೈವಿ. ಡಿವೋರ್ಸ್ ನೀಡಿದ್ದ ಪತಿ ಮುನಿರೆಡ್ಡಿ ಹಾಗೂ ಆತನ ಮಗ ಗಿರೀಶ್ ಕೊಲೆ ಮಾಡಿದ್ದಾರೆ. ಮುನಿರೆಡ್ಡಿ ಪೊಲೀಸರಿಗೆ ಶರಣಾಗಿದ್ದಾನೆ. ಮಗ ಪರಾರಿಯಾಗಿದ್ದಾನೆ.
ವಿಚ್ಛೇದನ ನೀಡಿದ ಪತ್ನಿಗೆ ಜೀವನಾಂಶಕ್ಕಾಗಿ ಜಮೀನು ನೀಡಿದ್ದ. ಆದರೆ, ಅದನ್ನು ವಾಪಸ್ ನೀಡುವಂತೆ ಪದೆಪದೆ ಜಗಳವಾಡುತ್ತಿದ್ದ. ನಿನಗೆ ಮಕ್ಕಳಿಲ್ಲ. ಜಮೀನು ತಗೊಂಡು ಏನು ಮಾಡ್ತಿ ಕೊಡು ಅಂತಾ ಆಗಾಗ ಜಗಳವಾಡುತ್ತಿದ್ದ. 2ನೇ ಹಂಡ್ತಿಗೆ 20 ವರ್ಷದ ಮಗ, ಒಬ್ಬಳು ಮಗಳಿದ್ದಾಳೆ. ಇಂದು ಪದ್ಮಮ್ಮನ ಮನೆಗೆ ಬಂದು ಗಲಾಟೆ ಮಾಡಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಆಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.