ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಪಕ್ಷಗಳು ದಲಿತ ಮುಖ್ಯಮಂತ್ರಿ ವಿಚಾರವನ್ನು ಮುನ್ನೆಲೆಗೆ ತಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ದಲಿತ ಮುಖ್ಯಮಂತ್ರಿ ಚರ್ಚೆಯ ಮೂಲಕ ಕಾರಣ ವಿಪಕ್ಷಗಳು. ತಮ್ಮ ಸ್ವಂತ ಸಮಸ್ಯೆಗಳನ್ನು ಮರೆಮಾಚಲು ಈ ವಿಚಾರ ಎತ್ತುತ್ತಿದ್ದಾರೆ. ದಲಿತರನ್ನು ಮುಖ್ಯಮಂತ್ರಿ ಮಾಡುವ ಇತಿಹಾಸ ಮತ್ತು ಇಚ್ಛಾಶಕ್ತಿ ಕಾಂಗ್ರೆಸ್ ಗೆ ಮಾತ್ರವಿದೆ ಎಂದಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಸುಗಮವಾಗಿ ನಡೆಯುತ್ತಿಲ್ಲವೇ, ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿಲ್ಲವೇ ಎಂದರು. ಸಿದ್ದರಾಮಯ್ಯನವರ ರಾಜಕೀಯ ಯಾವಾಗಲೂ ಸಾಮಾಜಿಕ ನ್ಯಾಯಲ್ಲಿದೆ. ಅವರ ನಿಲುವಿನಲ್ಲಿ ಅವಕಾಶವಾದಿ ಏನೂ ಇಲ್ಲ ಅಂತಾ ಸಮರ್ಥಿಸಿಕೊಂಡರು.




