ಪ್ರಜಾಸ್ತ್ರ ಸುದ್ದಿ
ನರಗುಂದ(Naragunda): ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ(Accident) ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಕೊಣ್ಣೂರು ಹೊರವಲಯದಲ್ಲಿ ನಡೆದಿದೆ. ತಂದೆ, ತಾಯಿ, ಮಗ ಹಾಗೂ ಮಗಳು ಮೃತಪಟ್ಟಿದ್ದಾರೆ.
ಹಾವೇರಿ ಮೂಲದ ರುದ್ರಪ್ಪ(55), ಪತ್ನಿ ರಾಜೇಶ್ವರಿ(45), ಮಗಳು ಐಶ್ವರ್ಯ(16) ಮಗ ವಿಜಯಕುಮಾರ(12) ಮೃತರೆಂದು ತಿಳಿದು ಬಂದಿದೆ. ಹುಬ್ಬಳ್ಳಿಯಿಂದ(Hubballi) ಕೊಣ್ಣೂರು ಕಡೆ ಹೊರಟಿದ್ದ ಕಾರು ಹಾಗೂ ಕುಳಗೇರಿಯಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಬಸ್ ನಡುವೆ ಮುಂಜಾನೆ 6.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.