Ad imageAd image

ಮಗ, ತಮ್ಮನಿಗೆ ವಿಷಕೊಟ್ಟು ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ?

ಒಂದೇ ಕುಟುಂಬದ ಮೂವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಆಜಾದ್ ನಗರದಲ್ಲಿ ನಡೆದಿದೆ.

Nagesh Talawar
ಮಗ, ತಮ್ಮನಿಗೆ ವಿಷಕೊಟ್ಟು ತಾನು ಆತ್ಮಹತ್ಯೆ ಮಾಡಿಕೊಂಡ ಮಹಿಳೆ?
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ(Shivamogga): ಒಂದೇ ಕುಟುಂಬದ ಮೂವರು ವಿಷಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ನಗರದ ಆಜಾದ್ ನಗರದಲ್ಲಿ ನಡೆದಿದೆ. ಭುವನೇಶ್ವರಿ(40), ಮಗ ದರ್ಶನ್(22) ಹಾಗೂ ಸಹೋದರ ಮಾರುತಿ(38) ಮೃತ ದುರ್ದೈವಿಗಳು. ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದೆ. ಮನೆಯಿಂದ ವಾಸನೆ ಬಂದ ಮೇಲೆಯೇ ಸುತ್ತಲಿನ ಜನರಿಗೆ ತಿಳಿದಿರುವುದು. ಕಿಟಕಿ ಗಾಜು ಒಡೆದು ನೋಡಿದಾಗ ಮೂವರು ಮೃತಪಟ್ಟಿರುವುದು ಕಂಡು ಬಂದಿದೆ.

ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು. ವಿಧಿವಿಜ್ಞಾನ ತಂಡ ಸಹ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಘಟನೆಯಿಂದ ಸಂಬಂಧಿಕರ ದುಃಖ ಮಡುಗಟ್ಟಿದೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.

ವಿಷಕೊಟ್ಟು, ತಾನು ಆತ್ಮಹತ್ಯೆ?

ಮೃತ ಭುವನೇಶ್ವರಿ ಗಂಡ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ ಹೋಟೆಲ್ ಕೆಲಸ ಮಾಡಿಕೊಂಡು ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದರು. ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಹಾಗೂ ಮಗ ಸರಿಯಾಗಿ ದುಡಿಯುತ್ತಿರಲಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ಸಾಕಷ್ಟು ಕಷ್ಟವಾಗಿತ್ತು. ಹೀಗಾಗಿ ಆಗಸ್ಟ್ 11ರ ರಾತ್ರಿ ಊಟದಲ್ಲಿ ವಿಷ(Poison) ಹಾಕಿ ಇಬ್ಬರಿ ಕೊಟ್ಟಿದ್ದಾಳೆ. ನಂತರ ತಾನು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯಿಂದ ಸತ್ಯ ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article