Ad imageAd image

ದೇವರ ಹಿಪ್ಪರಗಿ: ತೇರು ಎಳೆಯುವಾಗ ಗಾಲಿಗೆ ಸಿಲುಕಿ ಯುವಕ ಸಾವು

ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ರಥೋತ್ಸವದ ವೇಳೆ ಗಾಲಿಗೆ ಯುವಕನೊಬ್ಬ ಸಿಲುಕಿ ಮೃತಪಟ್ಟಿದ್ದಾನೆ.

Nagesh Talawar
ದೇವರ ಹಿಪ್ಪರಗಿ: ತೇರು ಎಳೆಯುವಾಗ ಗಾಲಿಗೆ ಸಿಲುಕಿ ಯುವಕ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ರಥೋತ್ಸವದ ವೇಳೆ ಗಾಲಿಗೆ ಯುವಕನೊಬ್ಬ ಸಿಲುಕಿ ಮೃತಪಟ್ಟಿದ್ದಾನೆ. ಘನ ಗುರುಸಿದ್ದೇಶ್ವರ ಜಾತ್ರೆಯಲ್ಲಿ ಇಂತಹದೊಂದು ಅನಾಹುತ ನಡೆದಿದೆ. ಅದೇ ಗ್ರಾಮದ ದೇವೇಂದ್ರ ಮನೋಹರ ಬಡಿಗೇರ(24) ಎನ್ನುವ ಯುವಕ ಮೃತಪಟ್ಟಿದ್ದಾನೆ.

ತೇರು ಎಳೆಯುವ ವೇಳೆ ಆಯತಪ್ಪಿ ದೇವೇಂದ್ರ ಕೆಳಗೆ ಬಿದಿದ್ದಾನೆ. ಆತನ ಮೈ ಮೇಲೆ ರಥದ ಗಾಲಿ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

WhatsApp Group Join Now
Telegram Group Join Now
Share This Article