Ad imageAd image

ನಾಡಬಾಂಬ್ ಸ್ಫೋಟ, ಯುವಕ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ದೊಡ್ಡನಲ್ಲಾಳ ಗ್ರಾಮದ ಮನೆಯೊಂದರಲ್ಲಿ ನಾಡಬಾಂಬ್ ಸ್ಫೋಟಗೊಂಡಿದೆ.

Nagesh Talawar
ನಾಡಬಾಂಬ್ ಸ್ಫೋಟ, ಯುವಕ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೊಸಕೋಟೆ(Hosakote): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ದೊಡ್ಡನಲ್ಲಾಳ ಗ್ರಾಮದ ಮನೆಯೊಂದರಲ್ಲಿ ನಾಡಬಾಂಬ್ ಸ್ಫೋಟಗೊಂಡಿದೆ. ಇದರಿಂದಾಗಿ ಮಗ ಮೃತಪಟ್ಟಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪವನ್(19) ಮೃತ ದುರ್ದೈವಿ. ಇತನ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಡುಪ್ರಾಣಿಗಳ ಬೇಟೆಗಾಗಿ ನಾಡುಬಾಂಬ್(Nadabomb) ಗಳನ್ನು ತಯಾರಿಸುತ್ತಿದ್ದರು ಎನ್ನು ಶಂಕೆ ವ್ಯಕ್ತವಾಗಿದೆ. ಈ ವೇಳೆ ಸ್ಫೋಟಗೊಂಡ ಪರಿಣಾಮ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಡಬಾಂಬ್ ಯಾವ ಕಾರಣಕ್ಕೆ ತಯಾರಿಸಲಾಗುತ್ತಿತ್ತು. ಅಕ್ರಮವಾಗಿ ನಡೆದುಕೊಂಡು ಬರುತ್ತಿತ್ತಾ ಎನ್ನುವುದು ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆ ನಡೆಯಬೇಕಿದೆ.

WhatsApp Group Join Now
Telegram Group Join Now
Share This Article