Ad imageAd image

ನಟ ಡಾ.ವಿಷ್ಣುರ್ವಧನ್ ಸಮಾಧಿ ನೆಲಸಮ

Nagesh Talawar
ನಟ ಡಾ.ವಿಷ್ಣುರ್ವಧನ್ ಸಮಾಧಿ ನೆಲಸಮ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaluru): ಕನ್ನಡದ ಸೂಪರ್ ಸ್ಟಾರ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸ್ಮಾರಕವನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ವಿಷ್ಣು ಅಭಿಮಾನಿಗಳು ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ, ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ 18 ವರ್ಷಗಳಿಂದ ಸಮಾಧಿ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ಅಭಿಮಾನಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಜಾಗದ ವಿವಾದಿಂದಾಗಿ ಸರಿಯಾಗಿ ಸಮಾಧಿ ನಿರ್ಮಿಸಲು ಆಗಲಿಲ್ಲ. ಇದರಿಂದ ಬೇಸತ್ತು ವಿಷ್ಣು ಕುಟುಂಬಸ್ಥರು ಅವರು ಹುಟ್ಟೂರು ಮೈಸೂರಿನಲ್ಲಿ ಹೊಸದಾಗಿ ಸ್ಮಾರಕ ನಿರ್ಮಿಸಲಾಗಿದೆ. ಆದರೆ, ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಹೀಗಾಗಿ ಅಭಿಮಾನಿಗಳು ಇಲ್ಲಿ ಸಮಾಧಿ ಇರಬೇಕು. ಪ್ರತಿವರ್ಷ ಇಲ್ಲಿ ಬಂದು ಗೌರವ ಸಲ್ಲಿಸಲಾಗುತ್ತೆ ಎಂದು ಹೇಳುತ್ತಿದ್ದಾರೆ. ನಿರ್ಮಾಪಕರಾದ ಕೆ.ಮಂಜು, ನಿರ್ದೇಶಕ ರವಿ ಶ್ರೀವತ್ಸವ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article