ಪ್ರಜಾಸ್ತ್ರ ಸುದ್ದಿ
ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹಣ ನೀಡುವಂತೆ ಬೆದರಿಕೆ ಸಂದೇಶವೊಂದು ಬಂದಿದೆ. ವಾಟ್ಸಪ್ ನಲ್ಲಿ ಅಪರಿಚಿತರಿಂದ ವಾಯ್ಸ್ ಮೆಸೇಜ್ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಲಿಗೆ ಮಾಡುವ ಉದ್ದೇಶದಿಂದ ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್ ಸದಸ್ಯರಿಂದ ಬೆದರಿಕೆ ಸಂದೇಶ ಬಂದಿರಬಹುದು ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಟ ರಣವೀರ್ ಸಿಂಗ ಮನೆಯ ಸುತ್ತ ಭದ್ರತೆಯನ್ನು ನೀಡಲಾಗಿದೆ. ನಟ ರಣವೀರ್ ಸಿಂಗ್ ನಟನೆಯ 2025ರಲ್ಲಿ ಬಿಡುಗಡೆಯಾದ ಧುರಂಧರ್ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದೆ. ಹೀಗಾಗಿ ಸುಲಿಗೆ ಉದ್ದೇಶದಿಂದ ಏನಾದರೂ ಬೆದರಿಕೆ ಸಂದೇಶ ಬಂದಿದ್ಯಾ ಅನ್ನೋ ಅನುಮಾನ ಮೂಡಿದೆ. ಮೆಸೇಜ್ ಮಾಡಿದವರನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ.




