Ad imageAd image

ತನ್ನ ಮೇಲಿನ ಆರೋಪಕ್ಕೆ ನಟಿ ಕೃಷಿ ತಾಪಂಡ ಪ್ರತಿಕ್ರಿಯೆ

Nagesh Talawar
ತನ್ನ ಮೇಲಿನ ಆರೋಪಕ್ಕೆ ನಟಿ ಕೃಷಿ ತಾಪಂಡ ಪ್ರತಿಕ್ರಿಯೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಟಿಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಬಳಿಕ 46ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ವಿಚಾರಣೆ ಬಳಿಕ ಅವರಿಗೆ ಜಾಮೀನು ನೀಡಿದೆ. ನಟಿಗಾಗಿ ನಾನು ಎಲ್ಲ ರೀತಿಯಿಂದ ಖರ್ಚು ಮಾಡಿದೆ. ಕಸ್ಟ್ ಮೈಜ್ ಪೋರ್ಸೆ ಕಾರು ನೀಡಿದೆ. 2024 ಜೂನ್ ನಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇವೆ. ಆದರೆ, ಆಕೆ ಮೋಸ ಮಾಡಿದಳು ಎಂದು ಅರವಿಂದ್ ಹೇಳುತ್ತಿದ್ದಾರೆ.

ನಟಿ ಕೃಷಿ ತಾಪಂಡ ನನಗೆ ಮೋಸ ಮಾಡಿದ್ದಾಳೆ ಎಂದು ನಿರ್ಮಾಪಕ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಆರೋಪಕ್ಕೆ ಇದೀಗ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಹೇಳಿದ್ದಾರೆ. ಕಳೆದ ಕೆಲವು ದಿನಗಳು ನನಗೆ ತುಂಬಾ ಭಾರವಾಗಿದ್ದವು. ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ. ಪೊಲೀಸರ, ಕಾನೂನು, ಮಾಧ್ಯಮ ಹಾಗೂ ಅನೇಕ ಜನರ ಬೆಂಬಲ ಸಿಕ್ಕಿರುವುದಕ್ಕೆ ಕೃತಜ್ಞೆ. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ ಅರ್ಥವಿಲ್ಲದೆ ಮಾತನಾಡುತ್ತಿದ್ದಾರೆ. ಎಲ್ಲರೂ ನನ್ನನ್ನು ನಂಬಲೇಬೇಕು ಅಥವ ಬೆಂಬಲಸಬೇಕು ಅನ್ನೋ ನಿರೀಕ್ಷೆ ನನಗಿಲ್ಲ. ಆದರೆ, ಯಾರನ್ನಾದರೂ ಕೆಡವೋ, ಕೀಳು ಮಾತನಾಡುವ ಹಕ್ಕು ಯಾರಿಗೂ ಇಲ್ಲ. ನನ್ನ ಬದುಕಿಗಾಗಿ ನಾನು ಮಾಡಬೇಕಾದುದನ್ನೇ ಮಾಡಿದ್ದೇನೆ. ನನ್ನ ಸತ್ಯದ ಮೇಲೆ ನಾನು ದೃಢವಾಗಿದ್ದೇನೆ. ನನ್ನ ಜೊತೆ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

WhatsApp Group Join Now
Telegram Group Join Now
Share This Article