Ad imageAd image

ಸಕಲೇಶಪುರದಲ್ಲಿ ಮತ್ತೆ ಮಣ್ಣು ಕುಸಿತ, ರೈಲು ಸಂಚಾರ ಬಂದ್

ಜಿಲ್ಲೆಯ ಸಕಲೇಶಪುರದ ಹತ್ತಿರದ ಬಾಳ್ಳುಪೇಟೆ ಬಳಿಯ ರೈಲು ಮಾರ್ಗದ ಮೇಲೆ ಶುಕ್ರವಾರ ರಾತ್ರಿ ಮತ್ತೆ ಮಣ್ಣು ಕುಸಿದಿದೆ. ಇದರಿಂದಾಗಿ ರೈಲು ಸಂಚಾರವನ್ನು

Nagesh Talawar
ಸಕಲೇಶಪುರದಲ್ಲಿ ಮತ್ತೆ ಮಣ್ಣು ಕುಸಿತ, ರೈಲು ಸಂಚಾರ ಬಂದ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹಾಸನ(Hasana): ಜಿಲ್ಲೆಯ ಸಕಲೇಶಪುರದ ಹತ್ತಿರದ ಬಾಳ್ಳುಪೇಟೆ ಬಳಿಯ ರೈಲು ಮಾರ್ಗದ ಮೇಲೆ ಶುಕ್ರವಾರ ರಾತ್ರಿ ಮತ್ತೆ ಮಣ್ಣು(Land slide) ಕುಸಿದಿದೆ. ಇದರಿಂದಾಗಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇತ್ತೀಚೆಗಷ್ಟೇ ಮಣ್ಣು ಕುಸಿತದಿಂದಾಗಿ ಎರಡ್ಮೂರು ವಾರಗಳ ಕಾಲ ರೈಲು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈಗ ಮತ್ತೆ ಇದೆ ಸಮಸ್ಯೆ ಕಾಣಿಸಿಕೊಂಡಿದೆ.

ಈ ಘಟನೆಯಿಂದಾಗಿ ಹಾಸನ-ಮಂಗಳೂರು ನಡುವಿನ ರೈಲುಗಳು(train) ಬಂದ್ ಆಗಿವೆ. ಪ್ರಯಾಣಿಕರು ಪರದಾಡುತ್ತಿದ್ದಾರೆ. ಕಳೆದ ಮಧ್ಯರಾತ್ರಿಯಿಂದಲೇ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ರೈಲ್ವೆ ಇಲಾಖೆಯ ಕಾರ್ಮಿಕರು ಮಣ್ಣು ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲಿ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article