Ad imageAd image

ಅಂಗಡಿ ಹಚ್ಚುವ ವಿಚಾರಕ್ಕೆ ಜಗಳ..

ಅಂಗಡಿ ಹಚ್ಚುವ ವಿಚಾರಕ್ಕೆ ಜಗಳವಾಗಿ, ನಂತರ ಮೌಲಾನಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಇಬ್ಬರನ್ನು

Nagesh Talawar
ಅಂಗಡಿ ಹಚ್ಚುವ ವಿಚಾರಕ್ಕೆ ಜಗಳ..
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ(Bagalakote): ಅಂಗಡಿ ಹಚ್ಚುವ ವಿಚಾರಕ್ಕೆ ಜಗಳವಾಗಿ, ನಂತರ ಮೌಲಾನಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಘಟನೆ ನವನಗರದಲ್ಲಿ ನಡೆದಿದೆ. ಪ್ರೀತಂ ಹಾಗೂ ಕಾರ್ತಿಕ್ ಬಂಧಿತರು. ನಾಗರಾಜ್ ಎಂಬಾತ ಪರಾರಿಯಾಗಿದ್ದಾನಂತೆ. ನವನಗರದ ಸೆಕ್ಟರ್ ನಂಬರ್ 4 ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ಹಚ್ಚುವ ವಿಚಾರಕ್ಕೆ ಮುಂಜಾನೆ ಜಗಳವಾಗಿದೆ. ಸಂಜೆ ಮೌಲಾನಾ ಮೇಲೆ ಬಂಧಿತರು ಹಲ್ಲೆ ಮಾಡಿದ್ದಾರೆಂದು ಮುಸ್ಲಿಂ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ.

ನವನಗರ ಪೊಲೀಸ್ ಠಾಣೆ ಎದುರು ಸಂಜೆ ಸೇರಿದ ಮುಸ್ಲಿಂ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೀತಂ, ಕಾರ್ತಿಕ್, ನಾಗರಾಜ್ ಎಂಬುವರು ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಇಬ್ಬರ ಬಂಧನವಾಗಿದೆ. ಓರ್ವನ ಬಂಧನದ ಕಾರ್ಯಾಚರಣೆ ನಡೆಯುತ್ತಿದೆ. ಸಣ್ಣದೊಂದು ವಿಚಾರ ದೊಡ್ಡದಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಹಂತಕ್ಕೆ ಬಂದಿದೆ.

WhatsApp Group Join Now
Telegram Group Join Now
Share This Article