ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಜಮ್ಮು ಕಾಶ್ಮೀರದ ಪುಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಕನ್ನಡಿಗರು ಇದ್ದಾರೆ. ಇವರ ಮೃತದೇಹ ಬುಧವಾರ ಸಂಜೆ ರಾಜ್ಯಕ್ಕೆ ಬರಲಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗದ ಮಂಜುನಾಥ್ ರಾವ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಮೃತ ದುರ್ದೈವಿಗಳು. ಪತ್ನಿ, ಮಗನ ಕಣ್ಮುಂದೆಯ ಇವರನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರಕ್ಕೆ ಸಚಿವ ಸಂತೋಷ್ ಲಾಡ್ ತೆರಳಿದ್ದು, ಪ್ರವಾಸಕ್ಕೆ ಹೋದ ಕನ್ನಡಿಗರ ರಕ್ಷಣೆಗೆ ಮುಂದಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆದುಕೊಂಡು ಬರುವ ಕೆಲಸ ನಡೆದಿದೆ.
ಶಿವಮೊಗ್ಗದ ಮಂಜುನಾಥ್ ರಾವ್ ಮೃತದೇಹ ಸಂಜೆ ಬರಲಿದೆ. ಭರತ್ ಭೂಷಣ್ ಮೃತದೇಹ ಮಧ್ಯಾಹ್ನ ಮುಂಬೈ ಮೂಲಕ ಬೆಂಗಳೂರಿಗೆ ಬರಲಿದೆ. ಗಾಯಗೊಂಡವರ ಯೋಗಕ್ಷೇಮ ಹಾಗೂ ಪ್ರವಾಸಕ್ಕೆ ತೆರಳಿದವರ ಸಹಾಯಕ್ಕಾಗೆ ಸಹಾಯವಾಣಿ ತೆರೆಯಲಾಗಿದೆ. ಏಜೆನ್ಸಿ ಮೂಲಕ ತೆರಳಿದ ಹಾಗೂ ಬೇರೆ ಬೇರೆ ಮಾರ್ಗಗಳಿಂದ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದವರ ವಿವರಗಳನ್ನು ಪಡೆಯಲಾಗುತ್ತಿದೆ. 080-43344334, 080-43344335, 080-43344336 ಹಾಗೂ 080-43344342 ಸಹಾಯವಾಣಿ ನಂಬರ್ ತೆರೆಯಲಾಗಿದೆ.