Ad imageAd image

ನಾಗಮಂಗಲ ಪ್ರಕರಣದ 55 ಆರೋಪಿಗಳಿಗೆ ಜಾಮೀನು

ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಎಲ್ಲ 55 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.

Nagesh Talawar
ನಾಗಮಂಗಲ ಪ್ರಕರಣದ 55 ಆರೋಪಿಗಳಿಗೆ ಜಾಮೀನು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandaya): ಜಿಲ್ಲೆಯ ನಾಗಮಂಗಲ(Nagamangala) ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಎಲ್ಲ 55 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಮಂಡ್ಯ 1ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್, 1 ಲಕ್ಷ ರೂಪಾಯಿ ಬಾಂಡ್, ಡಬಲ್ ಶ್ಯೂರಿಟಿ ಷರತ್ತು ವಿಧೀಸಿ ಜಾಮೀನು ನೀಡಿದೆ. ಇಂದು, ನಾಳೆ ರಜೆ ಇರುವುದರಿಂದ ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಳೆದ ಸೆಪ್ಟೆಂಬರ್ 11ರಂದು ನಾಗಮಂಗಲ ಪಟ್ಟಣದಲ್ಲಿ ಹಿಂದೂ-ಮುಸ್ಲಿಂರ(Hindu-Muslim) ನಡುವೆ ಗಲಾಟೆ ನಡೆದಿತ್ತು. ಇದರಿಂದಾಗಿ ಅಪಾರ ಪ್ರಮಾಣ ಆಸ್ತಿ, ಪಾಸ್ತಿ ಹಾನಿಯಾಗಿತ್ತು. ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಘಟನೆ ಸಂಬಂಧ 18 ಹಿಂದೂ ಸಮುದಾಯದ ಹಾಗೂ 37 ಮುಸ್ಲಿಂ ಸಮುದಾಯದ ಆರೋಪಿಗಳನ್ನು ಬಂಧಿಸಿದ್ದರು. ಈ ಕೋಮು ಗಲಭೆ ರಾಜಕೀಯ ಸ್ವರೂಪ ಸಹ ಪಡೆದುಕೊಂಡಿತ್ತು. ಇದೀಗ ಇವರೆಲ್ಲರಿಗೂ ಜಾಮೀನು ಸಿಕ್ಕಿದೆ.

WhatsApp Group Join Now
Telegram Group Join Now
Share This Article