Ad imageAd image

ಬಿಕ್ಲ ಶಿವ ಹತ್ಯೆ ಕೇಸ್: ಮತ್ತೆ ವಿಚಾರಣೆಗೆ ಬಂದ ಶಾಸಕ ಭೈರತಿ ಬಸವರಾಜ್

Nagesh Talawar
ಬಿಕ್ಲ ಶಿವ ಹತ್ಯೆ ಕೇಸ್: ಮತ್ತೆ ವಿಚಾರಣೆಗೆ ಬಂದ ಶಾಸಕ ಭೈರತಿ ಬಸವರಾಜ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ರೌಡಿ ಶೀಟರ್ ಬಿಕ್ಲ ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಭೈರತಿ ಬಸವರಾಜ್ ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ. ಈ ಮೂಲಕ 2ನೇ ಬಾರಿಗೆ ಪೊಲೀಸ್ ವಿಚಾರಣೆಗೆ ಬಂದಿದ್ದಾರೆ. ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ತನಿಖಾಧಿಕಾರಿ ಪ್ರಕಾಶ್ ರಾಥೋಡ ವಿಚಾರಣೆ ನಡೆಸಿದ್ದಾರೆ. ಈ ಕೊಲೆ ಪ್ರಕರಣ ಸಂಬಂಧ ಸುಪಾರಿ ಕಿಲ್ಲರ್ ಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಶಾಸಕ ಭೈರತಿ ಬಸವರಾಜ್ ಆಪ್ತ ಜಗದೀಶ ಅಲಿಯಾಸ್ ಜಗ್ಗ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಟಿ ರಚಿತಾ ರಾಮ್ ಗೆ ಸೀರೆ, ಬಂಗಾರದ ಒಡುವೆಗಳ ಊಡುಗರೆ ಕೊಟ್ಟ ವಿಚಾರ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

WhatsApp Group Join Now
Telegram Group Join Now
Share This Article