Ad imageAd image

ಸರ್ಕಾರ ಬೀಳಿಸುವ ಪ್ರಯತ್ನವೇ ಬಿಜೆಪಿ ಕೆಲಸ: ಸಚಿವ ಗುಂಡೂರಾವ್

ಸುಭದ್ರವಾಗಿರುವ ನಮ್ಮ ಸರ್ಕಾರ ಬೀಳಿಸಲು ಆಗುತ್ತಿಲ್ಲ. ಹೀಗಾಗಿ ಆಪರೇಷನ್ ಕಮಲ ಮಾಡುವ ಮೂಲಕ ಸರ್ಕಾರ ಬೀಳಿಸುವ ಪ್ರಯತ್ನವೇ ಬಿಜೆಪಿಯ ಕೆಲಸವಾಗಿದೆ

Nagesh Talawar
ಸರ್ಕಾರ ಬೀಳಿಸುವ ಪ್ರಯತ್ನವೇ ಬಿಜೆಪಿ ಕೆಲಸ: ಸಚಿವ ಗುಂಡೂರಾವ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಸುಭದ್ರವಾಗಿರುವ ನಮ್ಮ ಸರ್ಕಾರ ಬೀಳಿಸಲು ಆಗುತ್ತಿಲ್ಲ. ಹೀಗಾಗಿ ಆಪರೇಷನ್ ಕಮಲ ಮಾಡುವ ಮೂಲಕ ಸರ್ಕಾರ ಬೀಳಿಸುವ ಪ್ರಯತ್ನವೇ ಬಿಜೆಪಿಯ ಕೆಲಸವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೀಪಾವಳಿ ವೇಳೆಗೆ ಸರ್ಕಾರ ಬೀಳುತ್ತೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

ಇನ್ನು ಸಿದ್ದರಾಮಯ್ಯನವರೆ ನಮ್ಮ ಮುಖ್ಯಮಂತ್ರಿ. ಯಾರೂ ಸಿಎಂ ರೇಸಿನಲ್ಲಿ ಇಲ್ಲ. ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ. ಕೋರ್ಟಿನಲ್ಲಿ ನಮ್ಮ ವಿರುದ್ಧ ಯಾವುದೇ ತೀರ್ಪು ಬರಲ್ಲ ಎನ್ನುವ ವಿಶ್ವಾಸವಿದೆ. ಅವರ್ಯಾವ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಇಲ್ಲಿ ರಾಜ್ಯಪಾಲರ ಮನಸ್ಥಿತಿ ಗೊತ್ತಾಗುತ್ತೆ. ಪಕ್ಷಪಾತ ಮಾಡುತ್ತಿರುವುದು ಸಹ ಗೊತ್ತಾಗುತ್ತೆ. ಸುಳ್ಳು ಹಾಗೂ ಪ್ರಚೋದನೆ ನೀಡುವುದರಲ್ಲಿ ಬಿಜೆಪಿಯವರು ದೇಶದಲ್ಲಿಯೇ ನಂಬರ್ ಒನ್ ಅಲ್ಲವೆ ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Share This Article