Ad imageAd image

ವಿಜಯಪುರ: ವಿದ್ಯುತ್ ತಗುಲಿ ಸಹೋದರರ ಸಾವು

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸಹೋದರಿಬ್ಬರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ.

Nagesh Talawar
ವಿಜಯಪುರ: ವಿದ್ಯುತ್ ತಗುಲಿ ಸಹೋದರರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸಹೋದರಿಬ್ಬರು(Brothers) ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ. ರಾಜಕುಮಾರ ವಿಜಾಪುರ(31) ಹಾಗೂ ಶ್ರೀಕಾಂತ ವಿಜಾಪುರ(29) ಮೃತ(Death) ಸಹೋದರರು ಎಂದು ತಿಳಿದು ಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀಕಾಂತಗೆ ವಿದ್ಯುತ್ ತಗುಲಿದೆ. ಆಗ ಆತ ಕೆಳಗೆ ಬಿದಿದ್ದಾನೆ. ಆತನನ್ನು ರಕ್ಷಿಸಲು ಹೋದ ಸಹೋದರ ರಾಜಕುಮಾರಗೂ ವಿದ್ಯುತ್ ತಗುಲಿದೆ. ಇದರಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಟಿಸಿಯಿಂದ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಅದರ ವೈರ್ ದ್ರಾಕ್ಷಿ ಆ್ಯಂಗಲ್ ಸುತ್ತಲಾಗಿದೆ. ಆದರೆ, ವಿದ್ಯುತ್ ವೈರ್ ಕಟ್ ಆಗಿ ಆ್ಯಂಗಲ್ ಮೇಲೆ ಬಿದ್ದಿದೆ. ಇದು ಗೊತ್ತಾಗದೆ, ಕೆಲಸ ಸಹೋದರರು ಕೆಲಸ ಮಾಡುತ್ತಿದ್ದಾಗ ದುರಂತ ನಡೆದದೆ. ರೈತ ಸಹೋದರರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ(M.B.Patil) ಸಂತಾಪ ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article