Ad imageAd image

ಆಂಧ್ರ: ಬಸ್ ಅಪಘಾತ, 9 ಜನರ ಸಾವು, 22 ಜನರಿಗೆ ಗಾಯ

Nagesh Talawar
ಆಂಧ್ರ: ಬಸ್ ಅಪಘಾತ, 9 ಜನರ ಸಾವು, 22 ಜನರಿಗೆ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಿಂತೂರು(Chintoru): ಬಸ್ ವೊಂದು ಕಣಿವೆಗೆ ಬಿದ್ದ ಪರಿಣಾಮ 9 ಜನರು ಮೃತಪಟ್ಟ ದಾರುಣ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಚಿಂತೂರಿನಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ. ಚಾಲಕ, ಕಂಡಕ್ಟರ್ ಸೇರಿದಂತೆ 37 ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.

ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿನ ದುರ್ಗಾ ದೇವಸ್ಥಾನದ ಹತ್ತಿರ ಶುಕ್ರವಾರ ನಸುಕಿನಜಾವ 4.30ರ ಸುಮಾರಿಗೆ ಬಸ್ ಕಣಿವೆಗೆ ಉರುಳಿದೆ. ಕನಿಷ್ಠ 9 ಜನರು ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕರ್ನೂಲ್ ಹತ್ತಿರ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು 20 ಜನರು ಸಜೀವ ದಹನವಾಗಿದ್ದರು.

WhatsApp Group Join Now
Telegram Group Join Now
Share This Article