Ad imageAd image

ಅಧಿಕಾರಿಗಳ ನಡೆಗೆ ಸಿ.ಟಿ ರವಿ ಆಕ್ರೋಶ

ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಬೆಂಕಿ ಅನಾಹುತ ನಡೆದಿದೆ. ಇದು ಇಡೀ ಕಾರ್ಖಾನೆಗೆ ವ್ಯಾಪಿಸಿದ ಪರಿಣಾಮ ಬಧುವಾರ

Nagesh Talawar
ಅಧಿಕಾರಿಗಳ ನಡೆಗೆ ಸಿ.ಟಿ ರವಿ ಆಕ್ರೋಶ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ(Factory) ಮಂಗಳವಾರ ರಾತ್ರಿ ಬೆಂಕಿ ಅನಾಹುತ ನಡೆದಿದೆ. ಇದು ಇಡೀ ಕಾರ್ಖಾನೆಗೆ ವ್ಯಾಪಿಸಿದ ಪರಿಣಾಮ ಬಧುವಾರ ಮಧ್ಯಾಹ್ನದ ತನಕ ನಿಯಂತ್ರಣಕ್ಕೆ ಬಂದಿಲ್ಲ. ಈ ವೇಳೆ ಕಾರ್ಮಿಕನೊಬ್ಬ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. 20 ವರ್ಷದ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ಮೃತ ಕಾರ್ಮಿಕ(Worker) ಎಂದು ತಿಳಿದು ಬಂದಿದೆ. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ ಸುಟ್ಟ ಕರಕಲಾದ ಮಗನ ದೇಹದ ಭಾಗಗಳನ್ನು ಕೈಚೀಲದಲ್ಲಿ ಹಾಕಿಕೊಟ್ಟ ಅಧಿಕಾರಿಗಳ ಅಮಾನವೀತೆಯಿಂದ ಇನ್ನಷ್ಟು ಕುಸಿದು ಹೋಗಿದ್ದಾನೆ.

ದಾರಿಯಲ್ಲಿ ಕೈಚೀಲ ಹಿಡಿದುಕೊಂಡು ಅಳ್ಳುತ್ತಾ ಹೋಗುತ್ತಿದ್ದ ಮೃತ ಯುವಕನ ತಂದೆಯನ್ನು ನೋಡಿದರೆ ಪ್ರತಿಯೊಬ್ಬರಿಗೂ ಹೃದಯತುಂಬಿ ಬಂದಿದೆ. ಜೊತೆಗೆ ಅಧಿಕಾರಿಗಳ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಪರಿಷತ್ ಸದಸ್ಯ ಸಿ.ಟಿ ರವಿ(C T Ravi) ಅವರು, ಮಾನವೀತೆಯ ಅಂತಃಕರಣ ಇಲ್ಲದ ಕಾಂಗ್ರೆಸ್ ಸರ್ಕಾರ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಜಿಲ್ಲಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article