ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಸಣ್ಣ ಮಕ್ಕಳ ಕೈಯಲ್ಲಿ ಏನೇ ಸಿಕ್ಕರೂ ಅದು ಮೊದಲು ಮಾಡುವ ಕೆಲಸ ಬಾಯಿಗೆ ಹಾಕಿಕೊಳ್ಳುವುದು. ಇತ್ತೀಚೆಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ಪುಟ್ಟ ಮಗು ಹಾವನ್ನು(Snake) ಕಚ್ಚಿ ಸಾಯಿಸಿದ್ದ ಘಟನೆ ವೈರಲ್ ಆಗಿತ್ತು. ಇದೀಗ ರಾಜ್ಯದಲ್ಲಿ ಜ್ಯೂಸ್ ಬಾಟಲ್ ಮುಚ್ಚಳ ನುಂಗಿದ ಪರಿಣಾಮ ಉಸಿರುಗಟ್ಟಿ ಒಂದೂವರೆ ವರ್ಷದ ಮಗು(Child) ಮೃತಪಟ್ಟ ದಾರುಣೆ ಘಟನೆ ಶಿವಮೊಗ್ಗದ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಮಗು ಮೃತಪಟ್ಟಿದೆ.
ಮನೆಯಲ್ಲಿ ಆಟ ಆಡುವಾಗ ಮಗುವಿನ ಕೈಗೆ ಜ್ಯೂಸ್ ಬಾಟಲ್ ಸಿಕ್ಕಿದೆ. ಅದರ ಮುಚ್ಚಳ ಹೇಗೂ ತೆಗೆದಿದೆ. ಅದನ್ನು ಸೀದಾ ಬಾಯಿಗೆ ಹಾಕಿಕೊಂಡ ಪರಿಣಾಮ ಗಂಟಲಲ್ಲಿ ಬಂದು ಸಿಕ್ಕಿಬಿದ್ದಿದೆ. ಆಗ ಉಸಿರಾಟದ ಸಮಸ್ಯೆಯಾಗಿ ಒದ್ದಾಡಿದೆ. ಮಗು ಅಳಲು ಶುರು ಮಾಡಿದೆ. ಮಗು ಅಳುವುದನ್ನು ಕೇಳಿ ಅಲ್ಲಿಗೆ ಬಂದ ಪೋಷಕರು ನೋಡಿದರೆ ಮುಚ್ಚಳ ನುಂಗಿದ್ದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅದಾಗಲೇ ಮಗು ಮೃತಪಟ್ಟಿದೆ. ಕುಟುಂಬಸ್ಥರು ಪರಿಸ್ಥಿತಿ ನೋಡಲು ಆಗದಂತಾಗಿದೆ.