Ad imageAd image

ಕೃಷ್ಣೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

Nagesh Talawar
ಕೃಷ್ಣೆಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Manday): ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ(KRS) ಜಲಾಶಯ ಭರ್ತಿಯಾಗಿದೆ. ಹೀಗಾಗಿ ಸಂಪ್ರದಾಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿ ಇತರರು ಸೋಮವಾರ ಬಾಗಿನ ಅರ್ಪಿಸಿದರು. ಈ ಸಂಪ್ರದಾಯ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದ ನಡೆದುಕೊಂಡು ಬರುತ್ತಿದೆ.

ಇದೇ ರೀತಿ ಮುಂದೆ ನಾಡಿನ ಬೇರೆ ಭಾಗದಲ್ಲಿರುವ ಜಲಾಶಯಗಳಿಗೆ ರಾಜಕೀಯ ನಾಯಕರು ಬಾಗಿನ ಅರ್ಪಿಸುವ ಸಂಪ್ರದಾಯ ಶುರುವಾಗಿದೆ. ಈ ಮೂಲಕ ಮಳೆ, ಬೆಳೆ ಚೆನ್ನಾಗಿ ಆಗಿ ನಾಡಿನ ಜನರ ಜೀವನ ಸಮೃದ್ಧಿಯಾಗಲಿ, ಯಾವುದೇ ರೀತಿಯಿಂದ ತೊಂದರೆಯಾಗದಿರಲಿ ಎಂದು ಕೇಳಿಕೊಳ್ಳಲಾಗುತ್ತೆ.

ಈ ವೇಳೆ ಸಚಿವರಾದ ಚೆಲುವರಾಯಸ್ವಾಮಿ, ಹೆಚ್.ಸಿ ಮಹಾದೇವಪ್ಪ, ವೆಂಕಟೇಶ್ ಹಾಗೂ ಮಂಡ್ಯ ಮತ್ತು ಮೈಸೂರು ಭಾಗದ ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
TAGGED:
Share This Article