Ad imageAd image

ಲೈಂಗಿಕ ದೌರ್ಜನ್ಯ: ಕನ್ನಡ ಚಿತ್ರರಂಗದಲ್ಲಿಯೂ ತನಿಖೆಗೆ ಆಗ್ರಹಿಸಿ ಸಿಎಂ ಭೇಟಿ

ನೆರೆಯ ಕೇರಳ ಚಲನಚಿತ್ರ ರಂಗದಲ್ಲಿ ನಟಿಯರು, ಸಹನಟಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

Nagesh Talawar
ಲೈಂಗಿಕ ದೌರ್ಜನ್ಯ: ಕನ್ನಡ ಚಿತ್ರರಂಗದಲ್ಲಿಯೂ ತನಿಖೆಗೆ ಆಗ್ರಹಿಸಿ ಸಿಎಂ ಭೇಟಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನೆರೆಯ ಕೇರಳ ಚಲನಚಿತ್ರ ರಂಗದಲ್ಲಿ ನಟಿಯರು, ಸಹನಟಿಯರ ಮೇಲೆ ಲೈಂಗಿಕ(sexual assault) ದೌರ್ಜನ್ಯವೆಸಗಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಮೂರ್ತಿ ಹೇಮಾ ವರದಿಯಲ್ಲಿಯೂ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದು, ಅನೇಕ ನಟಿಯರು ಧ್ವನಿ ಎತ್ತಿದ್ದಾರೆ. ಇದೇ ರೀತಿ ಕರ್ನಾಟಕ ಚಲನಚಿತ್ರ ರಂಗದಲ್ಲಿಯೂ ಕಲಾವಿದೆಯವರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಸಂಬಂಧ ಸಮಿತಿ ರಚಿಸುವಂತೆ ಮುಖ್ಯಮಂತ್ರಿಯನ್ನು, ಫೈರ್ ನಿಯೋಗ ಮನವಿ ಸಲ್ಲಿಸಿದೆ.

ಫೈರ್((Film Industry for Right and Equality) ಎನ್ನುವ ಸಂಸ್ಥೆಯ ಮೂಲಕ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ ನಿಯೋಗ ಸಿಎಂ ಭೇಟಿ ಮಾಡಿದೆ. ಈ ವೇಳೆ ನಟಿಯರಾದ ಶ್ರುತಿ ಹರಿಹರನ್, ನೀತು, ಹಿರಿಯ ಲೇಖಕಿ ಡಾ.ವಿಜಯಾ ಸೇರಿ ಇತರರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರುವಾರ ಭೇಟಿ ಮಾಡಿ, ಸಮಿತಿ ರಚನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಲೇಖಕರು, ಪತ್ರಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ 130ಕ್ಕೂ ಹೆಚ್ಚು ಜನರ ಸಹಿಯುಳ್ಳ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್, ನಟಿಯರಾದ ಪೂಜಾ ಗಾಂಧಿ, ನಿಶ್ವಿಕಾ ನಾಯ್ಡು, ಐಂದ್ರಿತಾ ರೈ, ನೀತು ಶೆಟ್ಟಿ, ಮಾನ್ವಿತಾ ಕಾಮತ್, ಚೈತ್ರಾ ಆಚಾರ್, ಧನ್ಯ ರಾಮಕುಮಾರ್, ಸಿಂಧು ರಾವ್, ಸಾನ್ವಿ ಶ್ರೀವಾಸ್ತವ್, ಸಂಯುಕ್ತ ಹೆಗ್ಡೆ, ಮೇಘನಾ ಗಾಂವ್ಕಾರ್, ಶ್ರದ್ಧಾ ಶ್ರೀನಾಥ್, ನಟರಾದ ಸುದೀಪ್, ಕಿಶೋರ್, ದಿಗಂತ್ ಮಚಾಲೆ, ವಿನಯ್ ರಾಜಕುಮರ್, ಶರತ್ ಲೋಹಿತಾಶ್ವ, ನಿರ್ದೇಶಕರಾದ ಮನ್ಸೋರೆ, ಬಿ.ಸುರೇಶ್, ಕವಿರಾಜ್, ಸಹಿಕಹಿ ಚಂದ್ರು, ಸಿಹಿಕಹಿ ಗೀತಾ ಹೀಗೆ ಸುಮಾರು ನಟರು, ನಟಿಯರು, ನಿರ್ಮಾಪಕರು, ನಿರ್ದೇಶಕರು, ರಂಗಭೂಮಿ ಕಲಾವಿದರ, ಬರಹಗಾರರು, ಪತ್ರಕರ್ತರು ಸೇರಿದಂತೆ 153 ಜನರು ಸಹಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article