Ad imageAd image

ಜೆಡಿಎಸ್ ವಿರುದ್ಧ ಬಿಜೆಪಿ ನೀಡಿದ್ದ ಜಾಹೀರಾತನ್ನೇ ಫ್ಲೆಕ್ಸ್ ಮಾಡಿದ ಕಾಂಗ್ರೆಸ್

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ವಾಗ್ದಾಳಿ, ಮಾಡುತ್ತಿರುವ ಅಕ್ರಮಗಳ ಆರೋಪ, ಸಿಎಂ ರಾಜೀನಾಮೆಗಾಗಿ ನಡೆಸುತ್ತಿರುವ

Nagesh Talawar
ಜೆಡಿಎಸ್ ವಿರುದ್ಧ ಬಿಜೆಪಿ ನೀಡಿದ್ದ ಜಾಹೀರಾತನ್ನೇ ಫ್ಲೆಕ್ಸ್ ಮಾಡಿದ ಕಾಂಗ್ರೆಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್(BJP-JDS) ನಡೆಸುತ್ತಿರುವ ವಾಗ್ದಾಳಿ, ಮಾಡುತ್ತಿರುವ ಅಕ್ರಮಗಳ ಆರೋಪ, ಸಿಎಂ ರಾಜೀನಾಮೆಗಾಗಿ ನಡೆಸುತ್ತಿರುವ ಪಾದಯಾತ್ರೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಸಹ ತಿರುಗೇಟು ನೀಡುತ್ತಿದೆ. ಇದೀಗ ಈ ಹಿಂದೆ ಜೆಡಿಎಸ್ ನ ಹೆಚ್.ಡಿ ದೇವೇಗೌಡ(HDD) ಹಾಗೂ ಅವರ ಕುಟುಂಬದ ವಿರುದ್ಧ ಭೂಕಬಳಿಕೆಯ ಪಕ್ಷಿನೋಟ ಎನ್ನುವ ಶೀರ್ಷಿಕೆಯೊಂದಿಗೆ ಬಿಜೆಪಿ ಜಾಹೀರಾತು ನೀಡಿತ್ತು. ಇದನ್ನು ಕಾಂಗ್ರೆಸ್ ಈಗ ಅಸ್ತ್ರ ಮಾಡಿಕೊಂಡಿದೆ. ಮೈಸೂರಿನಲ್ಲಿ ಜಾಹೀರಾತಿನ ಬೃಹತ್ ಫ್ಲೆಕ್ಸ್ ಹಾಕಿ ಹಾಕಿದೆ.

ಮೆಟ್ರೋಪೋಲ್ ಸರ್ಕಲ್ ಹತ್ತಿರ ಕಾಂಗ್ರೆಸ್(Congress) ವತಿಯಿಂದ ಬಿಜೆಪಿ ನೀಡಿದ್ದ ಜಾಹೀರಾತನ್ನು(Advertisement) ಪ್ರಿಂಟ್ ಹಾಕಿಸಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಇದನ್ನು ತೆಗೆಯಬೇಕು ಎಂದು ಜೆಡಿಎಸ್ ಮಾಜಿ ಶಾಸಕ ಸಾ.ರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಒಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೂ ಮೊದಲು ಹೇಗೆಲ್ಲ ನಡೆದುಕೊಂಡಿದ್ದರು ಎನ್ನುವುದನ್ನು ಒತ್ತಿ ಒತ್ತಿ ಹೇಳುವ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.

WhatsApp Group Join Now
Telegram Group Join Now
Share This Article