Ad imageAd image

ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಪೇದೆಗಳು

ಲಂಚ ಪಡೆಯುವಾಗ ಇಬ್ಬರು ಪೊಲೀಸ್ ಪೇದೆಗಳು ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ.

Nagesh Talawar
ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಪೇದೆಗಳು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura):  ಗಲಾಟೆ ಪ್ರಕರಣಕ್ಕೆ ಸ್ಟೇಷನ್ ಬೇಲ್(Bail) ನೀಡಲು ಲಂಚ ಪಡೆಯುವಾಗ ಇಬ್ಬರು ಪೊಲೀಸ್ ಪೇದೆಗಳು ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ಗೋಳಗುಂಬಜ್(golgumbaz) ಠಾಣೆಯ ಕಾನ್ಸ್ ಟೇಬಲ್ ಗಳಾದ ಜಟ್ಟೆಪ್ಪ ಬಿರಾದಾರ ಹಾಗೂ ಹನುಮಂತಪ್ಪ ಪೂಜಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸ್ನೇಹಿತರ ನಡುವೆ ನಡೆದ ಗಲಾಟೆವೊಂದರ ಪ್ರಕರಣ ಪೊಲೀಸ್(Police) ಠಾಣೆಗೆ ಬಂದಿದೆ. ನಂತರ ಆರೋಪಿಗಳು ಪರಸ್ಪರ ರಾಜಿ ಸಂದಾನದ ಮೂಲಕ ಅದನ್ನು ಬಗೆಹರಿಸಿಕೊಂಡಿದ್ದರು. ಆದರೆ ಸ್ಟೇಷನ್ ಬೇಲ್ ನೀಡಲು ಈ ಇಬ್ಬರು ಪೇದೆಗಳು 50 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ.

ಹಣ ಕೊಡಲು ಒಪ್ಪದ ಆರೋಪಿಗಳು ಲೋಕಾಯುಕ್ತರ(lokayukta) ಗಮನಕ್ಕೆ ತಂದು ದೂರು ನೀಡಿದ್ದರು. ನಂತರ 40 ಸಾವಿರ ರೂಪಾಯಿ ಪೇದೆಗಳಿಗೆ ನೀಡುವಾಗ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಬುಧವಾರ ಬೆಳಿಗ್ಗೆ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಕಾನ್ಸ್ ಟೇಬಲ್ ಗಳನ್ನು ಬಂಧಿಸಲಾಗಿದೆ‌. ಈ ವೇಳೆ ವಿಜಯಪುರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ, ಡಿವೈಎಸ್ಪಿ ಸುರೇಶ ರೆಡ್ಡಿ, ಸಿಪಿಐ ಆನಂದ ಠಕ್ಕಣ್ಣವರ, ಎ.ಎ ಡೋಣಿ ಕಾರ್ಯಾಚರಣೆಯಲ್ಲಿದ್ದರು ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article