Ad imageAd image

ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಭಾರತೀಯರ ರಕ್ಷಾಕವಚ: ಖರ್ಗೆ

ದೇಶದ ತುಂಬ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ರಾಷ್ಟ್ರೀಯ ಹಬ್ಬದ ಖುಷಿ ಕಳೆಗಟ್ಟಿದೆ.

Nagesh Talawar
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಭಾರತೀಯರ ರಕ್ಷಾಕವಚ: ಖರ್ಗೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ದೇಶದ ತುಂಬ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಎಲ್ಲೆಡೆ ರಾಷ್ಟ್ರೀಯ ಹಬ್ಬದ ಖುಷಿ ಕಳೆಗಟ್ಟಿದೆ. ದೇಶದ ಜನರಿಗೆ ಶುಭ ಕೋರಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ಸಂವಿಧಾನ(Constitution) ಹಾಗೂ ಪ್ರಜಾಪ್ರಭುತ್ವ(Democracy) 140 ಕೋಟಿ ಭಾರತೀಯರ ರಕ್ಷಾಕವಚವಾಗಿದೆ. ಇದರ ರಕ್ಷಣೆಗಾಗಿ ಪ್ರಾಣ ನೀಡಲು ಸಹ ಸಿದ್ಧರಾಗಿ ಎಂದಿದ್ದಾರೆ.

ವಿವಿಧತೆಯಲ್ಲಿ ಏಕತೆಯನ್ನು ರಕ್ಷಿಸುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸು. ಆದರೆ, ಕೆಲವು ಶಕ್ತಿಗಳು ತಮ್ಮ ಸಿದ್ಧಾಂತಗಳನ್ನು ದೇಶದ ಮೇಲೆ ಬಲವಂತವಾಗಿ ಹೇರುವ ಪ್ರಯತ್ನ ನಡೆಸಿವೆ. ಆಹಾರ, ಬಟ್ಟೆ, ಅಭಿವ್ಯಕ್ತಿ, ಪೂಜಾ ವಿಧಾನ ಸೇರಿದಂತೆ ಪ್ರತಿಯೊಂದರ ಮೇಲೆ ತಮ್ಮ ಸಿದ್ಧಾಂತವನ್ನು ಜನರ ಮೇಲೆ ಹೇರುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ ಈ ಕುರಿತು ಜನರು ಜಾಗೃತರಾಗುವುದು ಮುಖ್ಯ. ಆರ್ಥಿಕ ಕುಸಿತ, ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

WhatsApp Group Join Now
Telegram Group Join Now
Share This Article