Ad imageAd image

ದಲಿತ ಶಿಕ್ಷಕ, ಪತ್ನಿ ಸೇರಿ ಎರಡು ಪುಟ್ಟ ಮಕ್ಕಳ ಹತ್ಯೆ

ದುಷ್ಕರ್ಮಿಗಳು ದಲಿತ ಶಿಕ್ಷಕ, ಪತ್ನಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ದಾರುಣ ಘಟನೆ

Nagesh Talawar
ದಲಿತ ಶಿಕ್ಷಕ, ಪತ್ನಿ ಸೇರಿ ಎರಡು ಪುಟ್ಟ ಮಕ್ಕಳ ಹತ್ಯೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಅಮೇಠಿ(Amethi): ದುಷ್ಕರ್ಮಿಗಳು ದಲಿತ ಶಿಕ್ಷಕ, ಪತ್ನಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳ ಮೇಲೆ ಗುಂಡು(Firing) ಹಾರಿಸಿ ಹತ್ಯೆ ಮಾಡಿದ ದಾರುಣ ಘಟನೆ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಗುರುವಾರ ರಾತ್ರಿ ನಡೆದಿದೆ. ಸುನಿಲ್(35), ಪೂನಂ(32) ಹಾಗೂ ಮಕ್ಕಳಾದ 6 ವರ್ಷದ ದೃಷ್ಟಿ ಹಾಗೂ 1 ವರ್ಷದ ಗಂಡು ಮಗುವನ್ನು ಸಹ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುರುವಾರ ರಾತ್ರಿ ಅವರ ಮನೆಗೆ ನುಗ್ಗಿದ ಹಂತಕರು ನಾಲ್ವರನ್ನು ಹತ್ಯೆ(Murder) ಮಾಡಿದ್ದಾರೆ. ಗುಂಡಿನ ಶಬ್ಧ ಕೇಳಿ ನೆರೆಹೊರೆಯುವರು ಓಡಿ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ರಾಯ್ ಬರೇಲಿ ಮೂಲದ ಸುನಿಲ್ ಅಮೇಠಿಯಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿರುವ ಪಾನಾಹುನಾ ಎನ್ನುವ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ(School Teacher )ಶಿಕ್ಷಕರಾಗಿದ್ದರು. ಹೀಗಾಗಿ ಇಲ್ಲಿಯೇ ನೆಲೆಸಿದ್ದರು. ಕಳೆದ ತಿಂಗಳು ಇವರು ರಾಯ್ ಬರೇಲಿಯ ಚಂದನ್ ವರ್ಮಾ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ತಮಗೆ ಏನಾದರೂ ತೊಂದರೆಯಾದರೆ ಚಂದನ್ ವರ್ಮಾ ಕಾರಣವೆಂದು ದೂರು ಸಲ್ಲಿಸಿದ್ದರು. ಇದೀಗ ನೋಡಿದರೆ ಗುರುವಾರ ರಾತ್ರಿ ಏನೂ ಅರಿಯದ ಎರಡು ಪುಟ್ಟ ಮಕ್ಕಳು ಸೇರಿದಂತೆ ಪತಿ, ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ಹಂತರಕ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article