Ad imageAd image

ದರ್ಶನ್ ಪ್ರಕರಣ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ: ಬಿ.ದಯಾನಂದ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ

Nagesh Talawar
ದರ್ಶನ್ ಪ್ರಕರಣ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ: ಬಿ.ದಯಾನಂದ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ(Murder) ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ(D Boss) ದರ್ಶನ್, ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 19 ಆರೋಪಿಗಳ ಚಾರ್ಜ್ ಶೀಟ್ ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್( police commissioner) ಆಯುಕ್ತ ಬಿ.ದಯಾನಂದ್ ಅವರು ತಿಳಿಸಿದ್ದಾರೆ. ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ತನಿಖೆ ಕೊನೆಯ ಹಂತಕ್ಕೆ ಬಂದಿದೆ. ಹೈದ್ರಾಬಾದ್ ನಿಂದ ಎಫ್ಎಸ್ಎಲ್ ವರದಿ ಇಂದು ಅಥವ ನಾಳೆ ಬರಲಿದೆ ಎಂದರು.

ಈಗಾಗ್ಲೇ ಬೆಂಗಳೂರಿನ ವಿಧಿ ವಿಜ್ಞಾನ(FSL Report) ಪ್ರಯೋಗಾಲಯದ ಎಲ್ಲ ವರದಿಗಳು ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿವೆ. ಹೈದ್ರಾಬಾದ್ ನಿಂದ ಬರುವುದು ಬಾಕಿ ಉಳಿದಿದೆ. ಇಂದು ಸಂಜೆ ಅಥವ ನಾಳೆ ಅದು ಬರಲಿದೆ ಅಂತಾ ಹೇಳಿದರು. ಜೂನ್ 8ರಂದು ಕೃತ್ಯ ನಡೆದಿದೆ. ಮರುದಿನ ಬೆಳಕಿಗೆ ಬಂದಿದೆ. ಅದಾದ ಬಳಿಕ ನಟ(Darshan) ದರ್ಶನ್, ಆಪ್ತ ಗೆಳತಿ ಪವಿತ್ರಾಗೌಡ ಸೇರಿ ಇತರರ ಬಂಧನವಾಗಿದೆ. ಕಳೆದ ಎರಡು ತಿಂಗಳಿನಿಂದ ನಟ ದರ್ಶನ್ ಸೇರಿ 19 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

WhatsApp Group Join Now
Telegram Group Join Now
Share This Article