Ad imageAd image

RCB ಆಟಗಾರರಿಗೆ ಸನ್ಮಾನದ ಬಗ್ಗೆ ಚರ್ಚಿಸುತ್ತೇನೆ: ಡಿಸಿಎಂ ಡಿಕೆಶಿ

Nagesh Talawar
RCB ಆಟಗಾರರಿಗೆ ಸನ್ಮಾನದ ಬಗ್ಗೆ ಚರ್ಚಿಸುತ್ತೇನೆ: ಡಿಸಿಎಂ ಡಿಕೆಶಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎತ್ತಿ ಹಿಡಿದಿದೆ. ಹೀಗಾಗಿ ಎಲ್ಲೆಲ್ಲೂ ಸಂಭ್ರಮ ಇನ್ನು ಮುಂದುವರೆದಿದೆ. ಇಂದು ಮಧ್ಯಾಹ್ನ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಗೆಲವಿನ ಮೆರವಣಿಗೆ ನಡೆಸಲಾಗುತ್ತಿದೆ. 3.30ರಿಂದ ವಿಧಾನಸೌಧ ಮುಂಭಾಗದ ಮೆರವಣಿಗೆ ಶುರುವಾಗಿ ಚಿನ್ನಸ್ವಾಮಿ ಸ್ಟೇಡಿಯಂ ತನಕ ನಡೆಯಲಿದೆ. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಿನ್ನೆ ನಡೆದ ಫೈನಲ್ ಪಂದ್ಯವನ್ನು ನಾನು ನೋಡಿದ್ದೇನೆ. ಕರ್ನಾಟಕಕ್ಕೆ ಆರ್ ಸಿಬಿ ಯುವಕರು ಹೆಮ್ಮೆ, ಗೌರವ ತಂದಿದ್ದಾರೆ. ಅವರನ್ನು ಸನ್ಮಾಸುವ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್, ಪೊಲೀಸ್ ಕಮಿಷನರ್ ಜೊತೆಗೆ ಚರ್ಚಿಸುತ್ತೇನೆ ಎಂದಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಬೆಂಗಳೂರಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಆಗುವುದು ಮಾತ್ರ ಪಕ್ಕಾ. ಎಲ್ನೋಡಿದರೂ ಕೆಂಪು ಬಣ್ಣದ ಬಾವುಟ ಹಾರಾಡಲಿದೆ.

WhatsApp Group Join Now
Telegram Group Join Now
Share This Article