Ad imageAd image

ಹಳಿ ತಪ್ಪಿದ ರೈಲು.. ಸಂಚಾರ ರದ್ದು

ದಿನದಿಂದ ದಿನಕ್ಕೆ ರೈಲುಗಳು ಹಳಿ ತಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹಲವಾರು ಪ್ರಾಣಿಕರು ಪ್ರಾಣಿ ಹಾನಿಯಾಗುತ್ತಿದ್ದರೂ ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ

Nagesh Talawar
ಹಳಿ ತಪ್ಪಿದ ರೈಲು.. ಸಂಚಾರ ರದ್ದು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ದಿನದಿಂದ ದಿನಕ್ಕೆ ರೈಲುಗಳು ಹಳಿ(Train) ತಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹಲವಾರು ಪ್ರಾಣಿಕರು ಪ್ರಾಣಿ ಹಾನಿಯಾಗುತ್ತಿದ್ದರೂ ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ಗುಮ್ಮಟನಗರಿಯ ವಿಜಯಪುರದಲ್ಲಿ ರೈಲು ಹಳಿ ತಪ್ಪಿದ ಘಟನೆ ನಡೆದಿದೆದೆ. ಹುಬ್ಬಳ್ಳಿ-ಸೊಲ್ಲಾಪುರ ಮಾರ್ಗದ ರೈಲು ಮಂಗಳವಾರ ತಡರಾತ್ರಿ ಇಂಡಿ(Indi) ತಾಲೂಕಿನ ಪಡನೂರು ರೈಲ್ವೆ ಸ್ಟೇಷನ್ ಹತ್ತಿರ ಹಳಿ ತಪ್ಪಿದೆ. ಹೀಗಾಗಿ ಈ ಭಾಗದ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಸಧ್ಯ ಟ್ರ್ಯಾಕ್ ರಿಪೇರಿ ಕೆಲಸ ನಡೆಸಲಾಗುತ್ತಿದೆ. ಹೀಗಾಗಿ ಈ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 17 ರೈಲುಗಳ ಸಂಚಾರ(Trains are Cancelled) ರದ್ದಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ದೂರದ ಊರುಗಳಿಗೆ ತರಳಬೇಕಿದ್ದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಈ ಮಾರ್ಗವಾಗಿ ಬರುತ್ತಿದ್ದ ರೈಲುಗಳನ್ನು ಹಿಂದಿನ ಸ್ಟೇಷನ್ ನಲ್ಲಿಯೇ ನಿಲ್ಲಿಸಲಾಗಿದ್ದು, ಪ್ರಯಾಣಿಕರು ಬಸ್ಸಿನ ಮೂಲಕ ಬರಬೇಕಾಗಿದೆ.

WhatsApp Group Join Now
Telegram Group Join Now
Share This Article