Ad imageAd image

ಭಾರೀ ಮಳೆ ಸೃಷ್ಟಿಸಿದ ಅನಾಹುತ

ಕಳೆದ ಎರಡ್ಮೂರು ದಿನಗಳಿಂದ ನಾಡಿನ ತುಂಬಾ ಮಳೆಯಾಗುತ್ತಿದೆ. ಇನ್ನು ಎರಡ್ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.

Nagesh Talawar
ಭಾರೀ ಮಳೆ ಸೃಷ್ಟಿಸಿದ ಅನಾಹುತ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಯಾದಗಿರಿ(Yadagiri): ಕಳೆದ ಎರಡ್ಮೂರು ದಿನಗಳಿಂದ ನಾಡಿನ ತುಂಬಾ ಮಳೆಯಾಗುತ್ತಿದೆ. ಇನ್ನು ಎರಡ್ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗೆ ಸುರಿಯುತ್ತಿರುವ ಮಳೆಯಿಂದ(Rain) ಕೆಲವು ಕಡೆ ಕೆಲವೊಂದಿಷ್ಟು ಅನಾಹುತಗಳಾಗಿವೆ. ಸೋಮವಾರ ಸಂಜೆ ಸಿಡಿಲು ಬಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಜೀನಕೇರಾ ತಾಂಡಾದಲ್ಲಿ ನಡೆದಿದೆ. ಕಿಶನ್ ಜಾಧವ್, ಚನ್ನಪ್ಪ ಜಾಧವ್, ನೇನು ಜಾಧವ್ ಹಾಗೂ ಸುನೀಬಾಯಿ ರಾಠೋಡ ಎಂಬುವರು ಮೃತ ದುರ್ದೈವಿಗಳು.

ಸೋಮವಾರ ಸಂಜೆ ಭರ್ಜರಿಯಾಗಿ ಮಳೆಯಾಗಿದೆ. ಈ ವೇಳೆ ಸಣ್ಣದಾದ ಮರಗೆಮ್ಮದೇವಿ ಗುಡಿಯಲ್ಲಿ ಕೆಲವರು ಆಶ್ರಯ ಪಡೆದಿದ್ದಾರೆ. ಗುಡುಗು, ಮಿಂಚು ಸಮೇತ ಸುರಿಯುತ್ತಿದ್ದ ಮಳೆಯ ನಡುವೆ ಭಾರೀ ಸದ್ದಿನಿಂದ ಸಿಡಿಲೊಂದು(Lightning) ಗುಡಿಗೆ ಬಡೆದಿದೆ. ಇದರ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ದರ್ಶನ್, ಗಣೇಶ್ ಹಾಗೂ ಮೌನೇಶ್ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article