Ad imageAd image

ವಿದ್ಯುತ್ ಅಪಘಾತದಲ್ಲಿ ಸಾವು, ಪರಿಹಾರ ವಿತರಣೆ

ಜಿಲ್ಲೆಯ ಬಬಲೇಶ್ವರ ತಾಲೂಕಿನ ಕುಮಟೆ ಗ್ರಾಮದ ನಿವಾಸಿ ಅಪ್ಪಾಸಾಬ್ ನಾಗಪ್ಪ ಸಾರವಾಡ ಎಂಬುವರು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Nagesh Talawar
ವಿದ್ಯುತ್ ಅಪಘಾತದಲ್ಲಿ ಸಾವು, ಪರಿಹಾರ ವಿತರಣೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲೆಯ ಬಬಲೇಶ್ವರ ತಾಲೂಕಿನ ಕುಮಟೆ ಗ್ರಾಮದ ನಿವಾಸಿ ಅಪ್ಪಾಸಾಬ್ ನಾಗಪ್ಪ ಸಾರವಾಡ ಎಂಬುವರು ವಿದ್ಯುತ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆತನ ಕುಟುಂಸ್ಥರಿಗೆ ಸಾಂತ್ವಾನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ ಪಾಟೀಲ, ಹೆಸ್ಕಾಂ ಪರವಾಗಿ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದೆ.

ಅಪ್ಪಾಸಾಬ್ ಪತ್ನಿ ಕಾವೇರಿಯವರಿಗೆ ಸಚಿವರು ಪರಿಹಾರದ ಚೆಕ್ ನೀಡಿ ಒಂದಿಷ್ಟು ಆರ್ಥಿಕ ನೆರವು ನೀಡಿದ್ದು, ನಿಧನದ ದುಃಖವನ್ನು ಯಾವ ಪರಿಹಾರವೂ ತುಂಬಲಾರದು. ಈ ಸಹಾಯ ಆ ಕುಟುಂಬಕ್ಕೆ ತುಸು ನೆರವಾಗಲಿ ಎಂಬ ಭಾವನೆ ನಮ್ಮದು ಎಂದಿದ್ದಾರೆ.

WhatsApp Group Join Now
Telegram Group Join Now
Share This Article