Ad imageAd image

ಬಿಜೆಪಿ, ಜೆಡಿಎಸ್ ನಾಯಕರನ್ನು ಅಣ್ಣ ಎಂದು ಕಾಲೆಳೆದ ಡಿಕೆಶಿ

ಬಿಜೆಪಿ ಮಾಜಿ ಸಚಿವ, ಶಾಸಕ ಮುನಿರತ್ನ ಸ್ವಪಕ್ಷೀಯ ನಾಯಕ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಹೆಚ್ಐವಿ ಸೋಂಕಿತ ರಕ್ತ ಸೇರಿಸುವ ಷಡ್ಯಂತ್ರ ರೂಪಿಸಿದ್ದರು

Nagesh Talawar
ಬಿಜೆಪಿ, ಜೆಡಿಎಸ್ ನಾಯಕರನ್ನು ಅಣ್ಣ ಎಂದು ಕಾಲೆಳೆದ ಡಿಕೆಶಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬಿಜೆಪಿ ಮಾಜಿ ಸಚಿವ, ಶಾಸಕ ಮುನಿರತ್ನ ಸ್ವಪಕ್ಷೀಯ ನಾಯಕ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಹೆಚ್ಐವಿ ಸೋಂಕಿತ ರಕ್ತ ಸೇರಿಸುವ ಷಡ್ಯಂತ್ರ ರೂಪಿಸಿದ್ದರು ಎನ್ನುವ ಗಂಭೀರ ಆರೋಪ ಸಂಬಂಧ, ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮುನಿರತ್ನ ಪ್ರಕರಣದ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ. ಆದರೆ, ಆರ್.ಅಶೋಕ್(R.Ashok) ವಿರುದ್ಧದ ಷಡ್ಯಂತ್ರ ಕೇಳಿ ನನಗೆ ದಿಗ್ಬ್ರಮೆಯಾಗಿದೆ ಎಂದಿದ್ದಾರೆ.

ಈ ರೀತಿಯ ಸಂಚನ್ನು ನಾವು ಎಲ್ಲಿಯೂ ನೋಡಿರಲಿಲ್ಲ. ಈ ಬಗ್ಗೆ ಅಶೋಕಣ್ಣ, ಸಿ.ಟಿ(C.T Ravi) ರವಿಯಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ(HDK), ಮಂಜುನಾಥ್ ಅವರೆ ಉತ್ತರಿಸಬೇಕು ಎನ್ನುವ ಮೂಲಕ ಕಾಲೆಳೆದಿದ್ದಾರೆ. ಹನಿಟ್ರ್ಯಾಪ್ ಸಂಬಂಧ ಬಿಜೆಪಿ ನಾಯಕರೆ ಮಾತನಾಡಬೇಕು ಎಂದಿದ್ದಾರೆ. ಹೆಚ್ಐವಿ ಸೋಂಕಿತ ಮಹಿಳೆಯರನ್ನು ಹನಿಟ್ರ್ಯಾಪ್ ಗೆ ಬಳಸುತ್ತಿದ್ದರು ಅನ್ನೋವ ವಿಚಾರವೇ ಇಡೀ ರಾಜ್ಯವನ್ನು ಬೆಚ್ಚಿಬೀಳಿಸುವಂತಿದೆ. ಇದರ ಸತ್ಯಾಸತ್ಯತೆ ಹೊರ ಬರಬೇಕಿದೆ.

WhatsApp Group Join Now
Telegram Group Join Now
Share This Article