Ad imageAd image

ಈದ್ ಮಿಲಾದ್: ಮಂಗಳೂರಲ್ಲಿ ಕಟ್ಟೆಚ್ಚರ

ಇಂದು ಎಲ್ಲೆಡೆ ಈದ್ ಮಿಲಾದ್ ಆಚರಿಸಲಾಗುತ್ತಿದೆ. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಒಟ್ಟಿಗೆ ಬಂದಿದ್ದು, ಕೆಲವು ಕಡೆ ಒಂದಿಷ್ಟು ತೊಂದರೆಗಳು ಆಗಿರುವುದು ಕಂಡು ಬಂದಿದೆ.

Nagesh Talawar
ಈದ್ ಮಿಲಾದ್: ಮಂಗಳೂರಲ್ಲಿ ಕಟ್ಟೆಚ್ಚರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಗಳೂರು(Mangaloru): ಇಂದು ಎಲ್ಲೆಡೆ ಈದ್(Eid Milad) ಮಿಲಾದ್ ಆಚರಿಸಲಾಗುತ್ತಿದೆ. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಒಟ್ಟಿಗೆ ಬಂದಿದ್ದು, ಕೆಲವು ಕಡೆ ಒಂದಿಷ್ಟು ತೊಂದರೆಗಳು ಆಗಿರುವುದು ಕಂಡು ಬಂದಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪೆ ವೆಲ್ ಮಾಡಿದ್ದ ಭಾಷಣಕ್ಕೆ ಆಡಿಯೋ ಬಿಡುಗಡೆ ಮಾಡಿ ತಾಕತ್ ಇದ್ದರೆ ಈದ್ ಮಿಲಾದ್ ರ್ಯಾಲಿ ನಿಲ್ಲಿಸಿ ಎಂದು ಶರೀಫ್ ಎಂಬುವರು ಸವಾಲ್ ಹಾಕಿದ್ದು, ಬಂಟ್ವಾಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಬಿ.ಸಿ ರೋಡ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿ ಮಾಡಿದ್ದಾರೆ.

ಶರೀಫ್ ಸವಾಲ್ ಸ್ವೀಕರಿಸಿದ್ದ ಪುನೀತ್ ಅತ್ತಾವರ ಎಂಬುವರು ಬಿ.ಸಿ ರೋಡ್ ಚಲೋ ಮಾಡುವುದಾಗಿ ಘೋಷಿಸಿದ್ದರು. ಇವರನ್ನು ಕಳೆದ ರಾತ್ರಿ ಮಂಡ್ಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ವಿಹೆಚ್ ಪಿ, ಭಜರಂಗದಳ(VHP- Bajrang Dal) ವತಿಯಿಂದ ರ್ಯಾಲಿ ನಡೆಸಲು ಕರೆ ನೀಡಿದ್ದು, ಎಸ್ಪಿ ಯತೀಶ್ ನೇತೃತ್ವದಲ್ಲಿ  ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದೆ.

WhatsApp Group Join Now
Telegram Group Join Now
Share This Article