Ad imageAd image

ಗಣಪತಿ ತರಲು ಹೋದಾಗ ಅಪಘಾತ, ಮೃತಪಟ್ಟ ಯುವಕರ ನೇತ್ರದಾನ

ಇಂದು ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಇದರ ನಡುವೆ ರಾಜ್ಯದ ಅನೇಕ ಕಡೆ ಅಪಘಾತಗಳು ಸಂಭವಿಸಿವೆ ಅನೇಕರು ಜೀವ ಕಳೆದುಕೊಂಡಿದ್ದಾರೆ.

Nagesh Talawar
ಗಣಪತಿ ತರಲು ಹೋದಾಗ ಅಪಘಾತ, ಮೃತಪಟ್ಟ ಯುವಕರ ನೇತ್ರದಾನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು(Chikkamagaloru): ಇಂದು ಎಲ್ಲೆಡೆ ಗಣೇಶ(Gnesh Festival) ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಇದರ ನಡುವೆ ರಾಜ್ಯದ ಅನೇಕ ಕಡೆ ಅಪಘಾತಗಳು ಸಂಭವಿಸಿವೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ಇದೇ ರೀತಿ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದ 7 ಯುವಕರು ತರೀಕೆರೆಗೆ ಗಣಪತಿ ತರಲು ಟಾಟಾ ಏಸ್ ನಲ್ಲಿ ಹೊರಟಿದ್ದಾಗ ಭೈರಾಪುರ ತಿರುವಿನಲ್ಲಿ(Accident) ಅಪಘಾತವಾಗಿದೆ. ಇದರಿಂದಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಹೀಗಾಗಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಇಂತಹ ದುಃಖದ ನಡುವೆಯೂ ಮೃತರಾದ ಶ್ರೀಧರ್(20) ಹಾಗೂ ಧನುಷ್(17) ಕುಟುಂಬಸ್ಥರು ನೇತ್ರದಾನ ಮಾಡುವ ಮೂಲಕ ನಾಲ್ವರ ಬಾಳಲ್ಲಿ ಬೆಳಕಾಗಿದ್ದಾರೆ. ವೈದ್ಯರ ಸಲಹೆ ಮೇರೆಗೆ ಈ ಇಬ್ಬರ ಯುವಕರ ಪೋಷಕರು ನೇತ್ರದಾನಕ್ಕೆ(Eye donation ) ಒಪ್ಪಿ ಸಾವಿನಲ್ಲಿ ಸಾರ್ಥಕತೆ ಮೆರೆದರು. ನಂತರ ಚಿಕಿತ್ಸೆಯ ಮೂಲಕ ಕಣ್ಣುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು.

ಅಪಘಾತದಲ್ಲಿ ಗುರುಮೂರ್ತಿ, ಮಂಜು, ಸಂದೀಪ್, ಮಂಜು, ಚಂದ್ರಶೇಖರ್ ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

WhatsApp Group Join Now
Telegram Group Join Now
Share This Article