Ad imageAd image

ಹೊಲದಲ್ಲಿ ವಿದ್ಯುತ್ ತಗುಲಿ ರೈತ ಸಾವು

ಹೊಲದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ರೈತ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹತ್ತಿರದ ಸಾಗ್ಯ ಗ್ರಾಮದಲ್ಲಿ ನಡೆದಿದೆ...

Nagesh Talawar
ಹೊಲದಲ್ಲಿ ವಿದ್ಯುತ್ ತಗುಲಿ ರೈತ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Mandya): ಹೊಲದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ರೈತ ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹತ್ತಿರದ ಸಾಗ್ಯ ಗ್ರಾಮದಲ್ಲಿ ನಡೆದಿದೆ. ರಮೇಶ್(38) ಅನ್ನೋ ರೈತ ಮೃತಪಟ್ಟಿದ್ದಾನೆ. ತೆಂಗಿನ ಗರಿಗಳನ್ನು ಹೊಲದಿಂದ ಆಚೆ ಹಾಕುವಾಗ ವಿದ್ಯುತ್ ತಗುಲಿ ಈ ಅವಗಡ ಸಂಭವಿಸಿದೆ.

ನಿತ್ಯ ಹೋಗುವಂತೆ ಮಂಗಳವಾರ ಮುಂಜಾನೆ ಹೊಲಕ್ಕೆ ಹೋಗಿದ್ದಾರೆ. ತೆಂಗಿನ ಗರಿಗಳನ್ನು ತೆಗೆದು ಹಾಕುವ ಸಂದರ್ಭದಲ್ಲಿ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

WhatsApp Group Join Now
Telegram Group Join Now
Share This Article