Ad imageAd image

ದೋಸ್ತಿ ಪಾದಯಾತ್ರೆಯಲ್ಲಿ ಹೊಡೆದಾಟ

Nagesh Talawar
ದೋಸ್ತಿ ಪಾದಯಾತ್ರೆಯಲ್ಲಿ ಹೊಡೆದಾಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಂಡ್ಯ(Manday): ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ದೋಸ್ತಿ ಪಾದಯಾತ್ರೆ ನಡೆಸಿರುವ ಬಿಜೆಪಿ ಹಾಗೂ ಜೆಡಿಎಸ್(BJP-JDS) ಕಾರ್ಯಕರ್ತರೆ ಹೊಡೆದಾಡಿಕೊಂಡ ಘಟನೆ ನಡೆದಿದೆ. 5ನೇ ದಿನದ ಪಾದಯಾತ್ರೆ ಬುಧವಾರ ಮಂಡ್ಯದಿಂದ ಶುರುವಾಗಿದೆ. ಇದರಲ್ಲಿ ಹಾಸನ ಮಾಜಿ ಶಾಸಕ ಪ್ರೀತಂಗೌಡ ಭಾಗಿಯಾಗಿದ್ದರು. ಈ ವೇಳೆ ಅವರ ಬೆಂಬಲಿಗರು ಕೂಗಿದ ಘೋಷಣೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ(Fight) ಮೀಲಾಯಿಸುವ ಹಂತಕ್ಕೆ ಹೋಗಿದೆ.

ಗೌಡರ ಗೌಡ ಪ್ರೀತಂಗೌಡ(Preetham gowda) ಎಂದು ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ದೇವೇಗೌಡರ(Devegowda) ಪರ ಘೋಷಣೆ ಕೂಗಿದ್ದಾರೆ. ಇದು ಎರಡೂ ಕಡೆ ವಾಗ್ವಾದಕ್ಕೆ ಕಾರಣವಾಗಿದೆ. ಜೆಡಿಎಸ್ ಕಾರ್ಯಕರ್ತನೊಬ್ಬನಿಗೆ ಹೊಡೆತ ಸಹ ಬಿದ್ದಿದೆ. ಇದರಿಂದಾಗಿ ಗಲಾಟೆ ಜೋರಾಗಿದೆ. ಅಲ್ಲಿಯೇ ಇದ್ದ ಪ್ರೀತಂಗೌಡ ತಮ್ಮ ಬೆಂಬಲಿಗರನ್ನು ನಿಯಂತ್ರಿಸಿಲ್ಲ. ಪೊಲೀಸರು ಮಧ್ಯಪ್ರವೇಶ ಮಾಡಿ ಪ್ರೀತಂಗೌಡ ಹಾಗೂ ಬೆಂಬಲಿಗರನ್ನು ಕಳಿಸಿದ್ದಾರೆ.

WhatsApp Group Join Now
Telegram Group Join Now
Share This Article