Ad imageAd image

ಮಹಿಳೆ ವಿರುದ್ಧ ದೂರು ದಾಖಲು

ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಬರುವ ಉತ್ತರ ಭಾರತದವರು ಸೇರಿದಂತೆ ಇತರೆ ರಾಜ್ಯಗಳ ಜನರಲ್ಲಿ ಕೆಲವರು

Nagesh Talawar
ಮಹಿಳೆ ವಿರುದ್ಧ ದೂರು ದಾಖಲು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಬರುವ ಉತ್ತರ ಭಾರತದವರು ಸೇರಿದಂತೆ ಇತರೆ ರಾಜ್ಯಗಳ ಜನರಲ್ಲಿ ಕೆಲವರು ಆಗಾಗ ತಮ್ಮ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತಾರೆ. ಕಳೆದ ಕೆಲ ದಿನಗಳಿಂದ ಸುಗಂಧಾ ಶರ್ಮಾ ಎನ್ನುವ ಮಹಿಳೆ ಬೆಂಗಳೂರಿನ ಬಗ್ಗೆ ತುಂಬಾ ಕೇವಲವಾಗಿ ಮಾತನಾಡಿದ್ದಳು. ಅದಕ್ಕೆ ತಕ್ಕ ತಿರುಗೇಟನ್ನು ಅನೇಕರು ನೀಡಿದ್ದರು. ಈಗ ಅದು ಆಕೆಯ ಕೆಲಸಕ್ಕೆ ಕುತ್ತು ಬಂದು ಆಕೆಯನ್ನು ವಜಾ ಮಾಡಲಾಗಿದೆ.

ಕನ್ನಡಪರ ಹೋರಾಟಗಾರ ರುಪೇಶ್ ರಾಜಣ್ಣ ಹಾಗೂ ಅವರ ತಂಡ ಈ ಮಹಿಳೆಯನ್ನು ಪತ್ತೆ ಹೆಚ್ಚಿ ಆಕೆ ಕೆಲಸ ಮಾಡುತ್ತಿದ್ದ ಕಂಪನಿಗೆ ಹೋಗಿ ದೂರು ಸಲ್ಲಿಸಿದ್ದಾರೆ. ಈ ಹಿಂದೆಯೂ ಇದೆ ರೀತಿ ಮಾಡಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇನ್ನು ಈಕೆಯ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಮಗೆ ಒಂದು ಅಸ್ತಿತ್ವ ಕೊಟ್ಟ ನೆಲಕ್ಕೆ ಗೌರವ ಕೊಡುವುದು ಬಿಟ್ಟು ದುರಂಹಕಾರದ ಮಾತುಗಳನ್ನಾಡುವುದು ಯಾರಿಗೂ ಒಳ್ಳೆಯದಲ್ಲ.

WhatsApp Group Join Now
Telegram Group Join Now
Share This Article