Ad imageAd image

ಆಂಧ್ರಾ, ತೆಲಂಗಾಣದಲ್ಲಿ ಪ್ರವಾಹ: ಜೂ ಎನ್ ಟಿಆರ್ 1 ಕೋಟಿ ಪರಿಹಾರ

ಸಾಕಷ್ಟು ಮಳೆಯಿಂದಾಗಿ ಆಂಧ್ರಾಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಸಾಕಷ್ಟು ಆಸ್ತಿ, ಪಾಸ್ತಿಗಳು ನಷ್ಟವಾಗಿದೆ.

Nagesh Talawar
ಆಂಧ್ರಾ, ತೆಲಂಗಾಣದಲ್ಲಿ ಪ್ರವಾಹ: ಜೂ ಎನ್ ಟಿಆರ್ 1 ಕೋಟಿ ಪರಿಹಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hyderabad): ಸಾಕಷ್ಟು ಮಳೆಯಿಂದಾಗಿ ಆಂಧ್ರಾಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರವಾಹ(Flood) ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಸಾಕಷ್ಟು ಆಸ್ತಿ, ಪಾಸ್ತಿಗಳು ನಷ್ಟವಾಗಿದೆ. ಈ ಹಿನ್ನಲೆಯಲ್ಲಿ ತೆಲುಗು ನಟ ಜೂನಿಯರ್(junior NTR) ಎನ್ ಟಿಆರ್ 1 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಆಂಧ್ರಾ ಹಾಗೂ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿಯನ್ನು ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ನೋಡಿ ಮನಸ್ಸಿಗೆ ಸಾಕಷ್ಟು ನೋವಾಗಿದೆ. ಎರಡು ರಾಜ್ಯಗಳು ಶೀಘ್ರದಲ್ಲಿ ಚೇತರಿಸಿಕೊಳ್ಳಲಿ. ಸೂಕ್ತ ಪರಿಹಾರಕ್ಕಾಗಿ(Relief Fund) ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ವೈಜಯಂತಿ ಮೂವೀಸ್ ಸಂಸ್ಥೆ ಆಂಧ್ರಾ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

WhatsApp Group Join Now
Telegram Group Join Now
Share This Article